ಮಲೇಬೆನ್ನೂರು : ಚೆಸ್ ಕ್ರೀಡಾ ಕೂಟದಲ್ಲಿ ಗಣೇಶ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಲೇಬೆನ್ನೂರು : ಚೆಸ್ ಕ್ರೀಡಾ ಕೂಟದಲ್ಲಿ ಗಣೇಶ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಲೇಬೆನ್ನೂರು, ಜು. 23 – ಬೆಳ್ಳೂಡಿ ಮಠದ ಚಂದ್ರಗುಪ್ತ ಮೌರ್ಯ ಪಬ್ಲಿಕ್‌ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಎಸ್. ಹೆಚ್. ಗಣೇಶ್ ತಾಲ್ಲೂಕು ಮಟ್ಟದ ಚೆಸ್  ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ  ಆಯ್ಕೆಯಾಗಿದ್ದಾನೆ. ಈ ವಿದ್ಯಾರ್ಥಿಗೆ ಕಾಗಿನೆಲೆ ಕನಕ ಗುರುಪೀಠದ  ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅಭಿನಂದಿಸಿ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸಿಬೇಕೆಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಎಸ್. ನಿಂಗಪ್ಪ. ಸಂಸ್ಥೆಯ ಶೈಕ್ಷಣಿಕ ನೀರ್ದೇಶಕಿ ಡಾ. ಶೃತಿ ಇನಾಂದಾರ್ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.

error: Content is protected !!