ನಾಗರಸನಹಳ್ಳಿಯಲ್ಲಿ ಇಂದು ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ

ನಾಗರಸನಹಳ್ಳಿಯಲ್ಲಿ ಇಂದು ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ

ದಾವಣಗೆರೆ ತಾಲ್ಲೂಕಿನ ನಾಗರಸನಹಳ್ಳಿಯಲ್ಲಿ ನಡೆಯುತ್ತಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ 8 ರಿಂದ 12 ರವರೆಗೆ ಲೋಕಕಲ್ಯಾಣಾರ್ಥವಾಗಿ ಶ್ರೀಮದ್‌ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ನಡೆಯುವುದು. 

ಸಮ್ಮುಖವನ್ನು ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ (ರಾಮಘಟ್ಟ) ಹಾಗೂ ಶ್ರೀ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ (ಹರಪನಹಳ್ಳಿ) ಇವರುಗಳು ವಹಿಸುವರು.

ಸಭಾ ಕಾರ್ಯಕ್ರಮದಲ್ಲಿ ಡಿ.ಆರ್‌. ಧನಂಜಯ ಸ್ವಾಗತಿಸುವರು. ಡಾ. ಬಿ.ಎಂ. ಜಯದೇವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು. ಜಿ.ಎಂ. ಸಿದ್ದೇಶ್ವರ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮವನ್ನು ಬಿ.ಜಿ. ಅಜಯ್‌ಕುಮಾರ್‌ ಉದ್ಘಾಟಿಸುವರು. 

ಮುಖ್ಯ ಅತಿಥಿಗಳಾಗಿ ಯಶವಂತರಾವ್‌ ಜಾಧವ್‌, ವೀರೇಂದ್ರ ಪಾಟೀಲ್‌, ರಾಜನಹಳ್ಳಿ ಶಿವಕುಮಾರ್‌, ಶ್ರೀನಿವಾಸ್‌ ದಾಸಕರಿಯಪ್ಪ, ಹೆಚ್‌.ಎಸ್. ನಾಗರಾಜ್, ತೇಜಸ್ವಿ ಪಟೇಲ್‌, ಎಸ್‌.ಬಿ. ಅಜಯ್‌, ಜಿ.ಎಂ. ರುದ್ರಗೌಡ್ರು ಆಗಮಿಸುವರು.

error: Content is protected !!