ನಗರದಲ್ಲಿ ನಾಳೆ ಕಾಂಗ್ರೆಸ್ ನೂತನ ಸಚಿವರು, ಶಾಸಕರಿಗೆ ಸನ್ಮಾನ

ದಾವಣಗೆರೆ, ಜು. 21- ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಲ್ಲ ಮುಂಚೂಣಿ ಘಟಕಗಳ ಒಕ್ಕೂಟದ ವತಿಯಿಂದ ನಾಡಿದ್ದು ದಿನಾಂಕ 23ರ ಭಾನುವಾರ ಬೆಳಗ್ಗೆ 11.30ಕ್ಕೆ ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ನೂತನ ಸಚಿವರು ಹಾಗೂ ಶಾಸಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ತಿಳಿಸಿದ್ದಾರೆ. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್, ಕೆ.ಎಚ್. ಮುನಿಯಪ್ಪ, ಎಚ್. ಸಿ. ಮಹಾದೇವಪ್ಪ, ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ ಎಚ್. ಆಂಜನೇಯ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೈಯದ್ ಸೈಫುಲ್ಲಾ, ಶಾಸಕರಾದ ಡಿ.ಜಿ. ಶಾಂತನಗೌಡ, ಬಿ. ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ಶಿವಗಂಗಾ ಬಸವರಾಜು, ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಮಾಜಿ ಶಾಸಕ ಎಸ್. ರಾಮಪ್ಪ, ಪರಾಜಿತ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

 ಮುಖ್ಯ ಅತಿಥಿಗಳಾಗಿ ತಂಜೀಮುಲ್ ಮುಸ್ಲಿಮೀನ್ ಕಮಿಟಿ ಅಧ್ಯಕ್ಷ ದಾದಾಪೀರ್ ಶೇಟ್, ಮಾಜಿ ಅಧ್ಯಕ್ಷ ಸಾಧಿಕ್ ಪೈಲ್ವಾನ್, ಮುಖಂಡರಾದ ಕೆ. ಪುಟ್ಟಸ್ವಾಮಿ ಗೌಡ್ರು, ಎಂ. ರಾಮಚಂದ್ರಪ್ಪ, ಡಿ. ಲಕ್ಷ್ಮಿವೆಂಕಟೇಶ್, ಧರ್ಮಸೇನಾ, ದಿನೇಶ್ ಕೆ. ಶೆಟ್ಟಿ, ಜಿ.ಎಸ್. ಮಂಜುನಾಥ್, ಎನ್. ರುದ್ರಮುನಿ, ಎಚ್.ಜೆ. ಮೈನುದ್ದೀನ್, ಅಯ್ಯೂಬ್ ಪೈಲ್ವಾನ್, ಗೌಡ್ರ ಚನ್ನಪ್ಪ, ಡಾ. ಎಚ್. ವಿಶ್ವನಾಥ್, ಬಿ. ವೀರಣ್ಣ, ಡಿ. ಬಸವರಾಜ್, ಟಿ.ಎಸ್. ರಾಮಯ್ಯ, ಎನ್.ಜಿ. ಪುಟ್ಟಸ್ವಾಮಿ, ಜಯ ದೇವ ನಾಯ್ಕ, ದೋಣಿ ನಿಂಗಪ್ಪ, ರಾಘವೇಂದ್ರ ನಾಯ್ಕ, ಕೆ.ಜಿ. ಶಿವಕುಮಾರ್ ಸೇರಿದಂತೆ ಎಲ್ಲಾ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅನಿತಾ ಬಾಯಿ ಮಾಲತೇಶ್, ಸುಭಾನ್‌ಸಾಬ್, ಎಸ್. ನಂಜಾ ನಾಯ್ಕ, ಡೋಲಿ ಚಂದ್ರು, ಕೆ.ಎಂ. ಮಂಜುನಾಥ್, ಗುರುಮೂರ್ತಿ, ಎಂ.ಕೆ. ಲಿಯಾಖತ್ ಅಲಿ, ರಾಕೇಶ್ ಮತ್ತಿತರರಿದ್ದರು.

error: Content is protected !!