ಹಡಗಲಿ ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿ ಚಿದಾನಂದ

ಹಡಗಲಿ ಕೃಷಿ ಪತ್ತಿನ ಸಹಕಾರ  ಸಂಘದ ಪ್ರತಿನಿಧಿಯಾಗಿ ಚಿದಾನಂದ

ಹೂವಿನಹಡಗಲಿ, ಜು.19- ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿ ಹಿರಿಯ ವಕೀಲ ಐಗೋಳ ಚಿದಾನಂದ ಆಯ್ಕೆಯಾಗಿದ್ದಾರೆ. ಇಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 7 ಮತಗಳು ಇವರಿಗೆ, 3 ಮತಗಳು ಎಂ.ಪಿ. ಸುಮಾ ಅವರಿಗೆ ಪ್ರಾಪ್ತವಾದವು.

ಪರಮೇಶ್ವರ ನಾಯಕ್ ಮತ್ತು ಚಿದಾನಂದರ ನಡುವೆ ಸ್ಪರ್ಧೆ : ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಈಗಾಗಲೇ ಹಿರೇಮಲ್ಲನಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೋ-ಆಪ್ ಆಗಿರುವುದರಿಂದ, ಮುಂಬರುವ ಬಿ.ಡಿ.ಸಿ.ಸಿ. ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ  ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ.

error: Content is protected !!