ಪ್ರಾಜೆಕ್ಟ್ ತಯಾರಿಯಲ್ಲಿ ಸ್ಥಳೀಯ ಸಮಸ್ಯೆಗಳ ಆಯ್ಕೆ ಇರಲಿ : ಅಮೂಲ್ಯ

ಪ್ರಾಜೆಕ್ಟ್ ತಯಾರಿಯಲ್ಲಿ ಸ್ಥಳೀಯ  ಸಮಸ್ಯೆಗಳ ಆಯ್ಕೆ ಇರಲಿ : ಅಮೂಲ್ಯ

ದಾವಣಗೆರೆ,ಜು.19- ಸ್ನಾತಕೋತ್ತರ ಎಂ.ಕಾಂ  ವಿದ್ಯಾರ್ಥಿಗಳು   ತಮ್ಮ ಪ್ರಾಜೆಕ್ಟ್    ವರದಿ ತಯಾರಿಸುವಾಗ ಸ್ಥಳೀಯ   ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಅದಕ್ಕೆ ಸೂಕ್ತ ಪರಿಹಾರ ಒದಗಿಸಿದಾಗ, ಆ ಸಮಸ್ಯೆಗೆ ಒಂದು ಪರಿಹಾರ ಸಿಕ್ಕಿ ಗುಣಾತ್ಮಕತೆ ಬರುತ್ತದೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಅಮೂಲ್ಯ ಆರ್. ಹೆಚ್  ಹೇಳಿದರು.

ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ    ಪ್ಲೇಸ್ಮೆಂಟ್ ಸೆಲ್ ವತಿಯಿಂದ   ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ತಯಾರಿ ಕುರಿತು ಉಪನ್ಯಾಸ ನೀಡಿದರು.

ಪ್ರಾಜೆಕ್ಟ್ ವರದಿ ತಯಾರಿಗಾಗಿ ವಿದ್ಯಾರ್ಥಿಗಳು ಬೆಂಗಳೂರು ಹಾಗೂ ಇತರೆ ಮಹಾನಗರಗಳಿಗೆ ಹೋಗಿ ಅಲ್ಲಿಯ ಕಂಪನಿಗಳ ಕುರಿತು ಅಧ್ಯಯನ ಮಾಡುವುದಕ್ಕಿಂತ, ದಾವಣಗೆರೆ ನಗರದಲ್ಲಿಯೇ ವ್ಯಾಪಾರ, ವಹಿವಾಟು ನಡೆಸುವ ಅಥವಾ ಕಂಪನಿಗಳ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಅದಕ್ಕೊಂದು ಪರಿಹಾರ ಒದಗಿಸಿದರೆ ಅವರಿಗೂ ಅನುಕೂಲವಾಗುತ್ತದೆ ಹಾಗೂ ತಾವು ಮಂಡಿಸುವ ಪ್ರಾಜೆಕ್ಟ್ ವರದಿಗೆ  ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ಲೇಸ್ಮೆಂಟ್ ಅಧಿಕಾರಿ  ವೆಂಕಟೇಶ್ ಬಾಬು,        ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳ ಕುರಿತು ಅಧ್ಯಯನ ನಡೆಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ  ಬಿ.ಸಿ. ತಹಶೀಲ್ದಾರ್,  ವಿಭಾಗದ ಸಂಯೋಜಕ ಡಾ. ಮಂಜುನಾಥ್ ಜೆ.ಎಂ,      ಪ್ಲೇಸ್ಮೆಂಟ್ ಅಧಿಕಾರಿ ರಾಜ ಮೋಹನ್ ಎನ್. ಆರ್.  ಮತ್ತಿತರರು ಭಾಗವಹಿಸಿದ್ದರು.

error: Content is protected !!