ರಾಣೇಬೆನ್ನೂರು, ಜು. 12 – ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ್ ಮುನಿ ಶ್ರೀ ಕಾಮಕುಮಾರ ನಂದಿ ಅವರನ್ನು ಬರ್ಬರವಾಗಿ ಹತ್ಯೆಗೈದ ಘಟನೆಯನ್ನು ಖಂಡಿಸಿ ರಾಣೇಬೆನ್ನೂರು ಜೈನ್ ಶ್ವೇತಾಂಬರ ಸಂಘದವರು ಆಚಾರ್ಯ ಮಹೇಂದ್ರಸಾಗರ ಸೂರೀಶ್ವರಜೀ ಅವರ ನೇತೃತ್ವದಲ್ಲಿ ನಾಡಿದ್ದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರಂಗನಾಥ ನಗರದ ಜೈನ್ ದೇವಸ್ಥಾನದಿಂದ ತಹಶೀಲ್ದಾರ್ ಕಛೇರಿ ವರೆಗೆ ಮೌನ ಮೆರವಣಿಗೆ ಮೂಲಕ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯಪಾಲ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ಪ್ರಕಾಶ್ ಜೈನ್ ತಿಳಿಸಿದ್ದಾರೆ.
ಜೈನಮುನಿ ಹತ್ಯೆ : ರಾಣೇಬೆನ್ನೂರಿನಲ್ಲಿ ನಾಳೆ ಮೌನ ಮೆರವಣಿಗೆ
![20 jaina mouna news 13.07.2023 ಜೈನಮುನಿ ಹತ್ಯೆ : ರಾಣೇಬೆನ್ನೂರಿನಲ್ಲಿ ನಾಳೆ ಮೌನ ಮೆರವಣಿಗೆ](https://janathavani.com/wp-content/uploads/2023/07/20-jaina-mouna-news-13.07.2023.jpg)