ಉದ್ಯಾನವನ ಜಾಗಕ್ಕೆ ಅಕ್ರಮವಾಗಿ ಆಸ್ತಿ ನಂಬರ್ ನೀಡಿದ ಆರೋಪ : ಅಮಾನತ್ತು

ದಾವಣಗೆರೆ, ಜು.12- ಮಹಾನಗರ ಪಾಲಿಕೆ‌ ಕರ ವಸೂಲಿಗಾರರಾದ ಶ್ರೀಮತಿ ಸುನೀತಾ ಸಿ.‌ ಅವರನ್ನು ಅಮಾನತ್ತುಗೊಳಿಸಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ. ಉದ್ಯಾನವನಕ್ಕೆ ಮೀಸಲಿಟ್ಟ‌ ಜಾಗವನ್ನು ಅಕ್ರಮವಾಗಿ ಉಪ ಆಸ್ತಿ ನಂಬರ್ ನೀಡಿ ಖಾತಾ ಉತಾರ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿರುವ ಕಾರಣ ಸುನೀತಾ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಆಯುಕ್ತರಾದ  ರೇಣುಕಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!