ಖನ್ನೂರ ವಿದ್ಯಾನಿಕೇತನ ಶಾಲಾ ಸಂಸತ್‌ಗೆ ಆಯ್ಕೆ

ರಾಣೇಬೆನ್ನೂರು, ಜು.11-  ಖನ್ನೂರ ವಿದ್ಯಾನಿಕೇತನ ಶಾಲೆಯಲ್ಲಿ   ಶಾಲಾ ಸಂಸತ್ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.        

ಸಂಸತ್‌ಗೆ  ಆಯ್ಕೆಯಾಗಿರುವ ಚಿ. ರಂಜಿತ ಶಾಸ್ತ್ರಿ, ಕು. ಹರ್ಷಿತಾ ಕೂನಬೇವು,   ಗಗನದೀಪ ಆಡೂರ,   ಕು. ಗಮ್ಯಾ,  ಅಸಾದುಲ್ಲಾ   ಚಿ. ನಿಹಾಲ್ ಶಿಗ್ಗಾಂವಿ,  ಕು. ದೀಕ್ಷಾ ಹಾಗೂ ಕು. ಚಿರಾಗ ಜೀರಾವಾಲಾ,   ಚಿ. ತರುಣ ಹಾಗೂ ಭಾವನಾ ಜೈನ್  ಅವರುಗಳಿಗೆ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸಮೀರ ಫನಾಂಡೀಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಎಂ. ಎಂ. ಖನ್ನೂರ ಮಾತನಾಡಿ,  ನಾಯಕನು ಒಬ್ಬ ನಾವಿಕನಿದ್ದಂತೆ ನಾವಿಕನಿಲ್ಲದ ಹಡಗು ಹೇಗೆ ಚಲಿಸದೋ ಹಾಗೆಯೇ ನಾಯಕನಿಲ್ಲದೆ ಯಾವ ಕೆಲಸಗಳೂ ಸುವ್ಯವಸ್ಥಿವಾಗಿ ನಡೆಯಲಾರವು ಎಂದು ಮಕ್ಕಳಿಗೆ ಸೂಚ್ಯವಾಗಿ ತಿಳಿ ಹೇಳಿದರು.  

ಸಂಸ್ಥೆಯ   ಉಪಾಧ್ಯಕ್ಷರಾದ ಶ್ರೀಮತಿ ಸುಲೋಚನ ಎಂ. ಖನ್ನೂರ, ಛೇರ್ಮನ್. ಡಾ. ಪ್ರವೀಣ ಎಂ.ಖನ್ನೂರ ಹಾಗೂ ಸಿಇಓ ಡಾ. ಶೈಲಶ್ರೀ ಪಿ. ಖನ್ನೂರ  ಆಗಮಿಸಿದ್ದರು. ರೋಶ್ನಿ  ಗುತ್ತಲ ಸ್ವಾಗತಿಸಿದರು. ಕು. ಉಜನೈಬ್ ನಿರೂಪಣೆ ಮಾಡಿದರು.

error: Content is protected !!