ಹೊಳೆಹೊನ್ನೂರಿನಲ್ಲಿ ಇಂದಿನಿಂದ ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯ ವ್ರತ

ಹೊಳೆಹೊನ್ನೂರಿನಲ್ಲಿ ಇಂದಿನಿಂದ  ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯ ವ್ರತ

ದಾವಣಗೆರೆ, ಜು. 11 – ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀಮದುತ್ತಾರದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ತಮ್ಮ 28ನೇ ಚಾತುರ್ಮಾಸ್ಯ ವ್ರತವನ್ನು  ಶಿವಮೊಗ್ಗ ಜಿಲ್ಲೆಯ ಹೊಳೆ ಹೊನ್ನೂರು ಕ್ಷೇತ್ರದಲ್ಲಿ ಕೈಗೊಳ್ಳಲಿದ್ದಾರೆ. ಶ್ರೀಪಾದಂಗಳವರು ಇಂದು ಸಂಜೆ ಹೊಳೆಹೊನ್ನೂರು ಪುರ ಪ್ರವೇಶ ಮಾಡಿದರು. 

ಹೊಳೆ ಹೊನ್ನೂರು ಸರ್ಕಲ್‌ನಿಂದ ಶ್ರೀಮನ್ ಮೂಲ ಸೀತ ರಾಮಚಂದ್ರ ದೇವರು ಹಾಗೂ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀಪಾದರು ಬೃಂದಾವನದಲ್ಲಿ ಸನ್ನಿಹಿತರಾಗಿರುವ ತಮ್ಮ ಪರಂಪರೆಯ ಪೂರ್ವ ಗುರುಗಳಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ ಮೂಲ ಬೃಂದಾವನದ ದರ್ಶನ ಪಡೆದರು. 

ನಾಳೆ ದಿನಾಂಕ 12ರ ಬುಧವಾರ ಶ್ರೀ ಸತ್ಯಧರ್ಮತೀರ್ಥರ ಅನುಗ್ರಹದೊಂದಿಗೆ ಶ್ರೀ ಸತ್ಯಾತ್ಮತೀರ್ಥರು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಲಿದ್ದಾರೆ. 

ಉತ್ತರಾದಿ ಮಠಾಧೀಶರ ಈ ಚತುರ್ಮಾಸ ಕಾರ್ಯಕ್ರಮವು ಇಂದಿನಿಂದ ಬರುವ ಸೆಪ್ಟೆಂಬರ್ 29 ರವರೆಗೆ ಹೊಳೆಹೊನ್ನೂರಿನಲ್ಲಿ ನಡೆಯಲಿದೆ. ಪ್ರತಿದಿನ ಶ್ರೀಗಳಿಂದ ಸಂಸ್ಥಾನ ದೇವರ ಪೂಜೆ ವಿವಿಧ ವಿದ್ವಾಂಸರಿಂದ ಪ್ರವಚನ, ಹಬ್ಬ ಹರಿದಿನಗಳಂದು ವಿಶೇಷ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನಾ ಮಂಡಳಿಗಳಿಂದ ಭಜನೆ, ಲೋಕ ಕಲ್ಯಾಣಾರ್ಥ ಹೋಮ, ಹವನಾದಿಗಳು ನಡೆಯಲಿವೆ. 

ವಿವರಕ್ಕೆ ಸಂಪರ್ಕಿಸಿ : ಶ್ರೀನಿವಾಸಾಚಾರ್ಯ ನವರತ್ನ (9481064750), ಪುರುಷೋತ್ತಮಾಚಾರ್ಯ ನವರತ್ನ  (9483721572), ರಘೋತ್ತಮಾಚಾರ್ಯ ಸೊಂಡೂರ್  (8762406466).

error: Content is protected !!