ಭರಮಸಾಗರ ಸಾಯಿ ಮಂದಿರದಲ್ಲಿ ಗುರು ಪೂರ್ಣಿಮೆ ಆಚರಣೆ

ಭರಮಸಾಗರ ಸಾಯಿ ಮಂದಿರದಲ್ಲಿ ಗುರು ಪೂರ್ಣಿಮೆ ಆಚರಣೆ

ಭರಮಸಾಗರ, ಜು. 10- ಸ್ಥಳೀಯ ಬಿಳಿಚೋಡು ರಸ್ತೆಯ ಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಯನ್ನು ವಿಶೇಷವಾಗಿ ಆಚರಿಸಲಾ ಯಿತು. ಮಾನಿಹಳ್ಳಿ ಪುರವರ್ಗ ಮಠದ ಶ್ರೀ ಮಳೆಯೋಗೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಈ ಕಾರ್ಯಕ್ರಮ ದಲ್ಲಿ ಎಸ್ ಎಂ ಎಲ್ ಮನೆ ಯವರು, ನಾಗರತ್ನ, ಗುರು ಮೂರ್ತಿ, ಬಿ.ಸಿ. ಪಾಟೀಲ್, ನಂದಿಹಳ್ಳಿ ತಿಪ್ಪೇಸ್ವಾಮಿ, ನಟರಾಜ, ಸಾಯಿ ದೀಪ, ರೇಣುಕಮ್ಮ ಮತ್ತಿತರರಿದ್ದರು. ಸಾಯಿ ಮಂದಿರದ ವ್ಯವಸ್ಥಾಪಕ ಚಂದ್ರಶೇಖರ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

error: Content is protected !!