ನಗರದಲ್ಲಿ ಶ್ರೀ ಗಾಯತ್ರಿ ಹೋಮ : ಸರ್ವ ಭಕ್ತರಿಗೆ ಆಹ್ವಾನ

ದಾವಣಗೆರೆ, ಜು.10- ನಗರದ ಶ್ರೀ ಗಾಯತ್ರಿ ಪರಿವಾರದಿಂದ ಸಾರ್ವಜನಿಕವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,  ಶ್ರೀ ಗಾಯತ್ರಿ ಹೋಮ ಹಮ್ಮಿಕೊಳ್ಳಲಾಗಿದೆ ಎಂದು ಪರಿವಾರದ ಅಧ್ಯಕ್ಷರಾದ ಡಾ. ಸುಶೀಲಮ್ಮ ತಿಳಿಸಿದ್ದಾರೆ. ಯಾವುದೇ ಜಾತಿ, ಮತ, ಲಿಂಗ ಭೇದವಿಲ್ಲದೇ ಈ ಅಧ್ಯಾತ್ಮ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬಹುದು.  ಇದೇ ದಿನಾಂಕ 23 ರ ಭಾನುವಾರ ನಗರದ ಎಂ.ಸಿ.ಸಿ `ಬಿ’ ಬ್ಲಾಕ್‍ನ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ದಾವಣಗೆರೆ ಗೌಡ ಸಾರಸ್ವತ ಸಮಾಜದ ಸಹಯೋಗದಲ್ಲಿ ನಡೆಯಲಿರುವ ಈ  ಸಮಾರಂಭದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ  9535737979, 9342441194, 9535854421, 9845277088, 9448979957 ಸಂಪರ್ಕಿಸಿ.

error: Content is protected !!