ಫೈನಾನ್ಸ್ ಕಂಪನಿಯವರೆಂದು ಹೇಳಿ 45 ಸಾವಿರ ರೂ. ವಂಚನೆ

ದಾವಣಗೆರೆ, ಜು. 8- ಫೈನಾನ್ಸ್ ಕಂಪನಿಯವರೆಂದು ಹೇಳಿ, 50 ಸಾವಿರ ರೂ. ಕಟ್ಟದಿದ್ದರೆ ಗಾಡಿ ಸೀಜ್ ಮಾಡುವುದಾಗಿ ಹೇಳಿ 45 ಸಾವಿರ ರೂ. ವಂಚಿಸಿದ ಘಟನೆ ನಡೆದಿದೆ. ವಿದ್ಯಾನಗರ ಠಾಣೆಯಲ್ಲಿ ನಾಗರಾಜ ಎಂಬು ವವರು ಈ ಕುರಿತು ದೂರು ನೀಡಿದ್ದು, ಜು.4ರಂದು ಬೂದಾಳ್ ರಸ್ತೆಯಿಂದ ನಿಟುವಳ್ಳಿಗೆ ಬಾಡಿಗೆ ಹೋಗುವ ಸಂದರ್ಭದಲ್ಲಿ ಫೈನಾನ್ಸ್ ಕಂಪನಿಯ ವರೆಂದು ಹೇಳಿ ವಂಚಿಸಿದ್ದಾರೆ ಎಂದು 10 ಜನರ ಮೇಲೆ ದೂರು ನೀಡಿದ್ದಾರೆ.

error: Content is protected !!