ಜೈನಮುನಿಯ ಹತ್ಯೆಗೆ ಎಸ್ಸೆಸ್‌-ಎಸ್ಸೆಸ್ಸೆಂ ಖಂಡನೆ

ದಾವಣಗೆರೆ, ಜು. 8 –  ಬೆಳಗಾವಿ ಜೈನಮುನಿಗಳನ್ನು ಹತ್ಯೆ ಮಾಡಿರುವುದನ್ನು ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಶ್ರೀ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಪ್ರಕರಣ ನಿಜಕ್ಕೂ ಜೈನ ಸಮಾಜಕ್ಕೆ ಹಾಗೂ ಜೈನ ಮುನಿಗಳಿಗೆ ತೀವ್ರ ಆತಂಕವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಜೈನಮುನಿಗಳ ಹತ್ಯೆ ಮಾಡಿರುವ ಯಾರೇ ಆದರೂ ಸಹ ಉಗ್ರ ಶಿಕ್ಷೆಗೆ ಗುರಿಪಡಿಸ ಬೇಕೆಂದು ಅವರುಗಳು ಆಗ್ರಹಿಸಿದ್ದಾರೆ.

error: Content is protected !!