ಇಂದು ಜೈನ ಸಮುದಾಯದಿಂದ ಡಿಸಿಗೆ ಮನವಿ

ಪ್ರಸ್ತುತ ಜೈನ ಧರ್ಮ ಅಪಾಯದಲ್ಲಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸಮೀಪ ಹಿರೆಕೋಡಿಯಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯಿಂದ ಜೈನ ಸಮಾಜ ಆಘಾತಗೊಂಡಿದೆ. ಜೈನ ಮುನಿಗಳಿಗೆ ರಕ್ಷಣೆ ಇಲ್ಲವಾಗಿದೆ. ಇದರಿಂದ ಇತರೆ ಜೈನ ಮುನಿಗಳು ಇದೀಗ ಅಪಾಯದ ಕಕ್ಷೆಯೊಳಗೆ ಉಸಿರು ಬಿಗಿಹಿಡಿದು ಧರ್ಮಪಾಲನೆ ಮಾಡುವಂತಾಗಿದೆ. 

ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಜೈನ ಸಮಾಜಕ್ಕೆ ರಕ್ಷಣೆ ಒದಗಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂಸಿಸಿ `ಬಿ’ ಬ್ಲಾಕ್‌ನಲ್ಲಿರುವ ಶ್ರೀ ಆದಿನಾಥ ಜಿನ ಮಂದಿರದಲ್ಲಿ ಇಂದು ಮುನಿಶ್ರೀ 108 ಕಾಮಕುಮಾರ ನಂದಿ ಮಹಾರಾಜರಿಗೆ ಶ್ರದ್ಧಾಂಜಲಿ ಸಲ್ಲಿಸಿ, ನಂತರ ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮೌನವಾಗಿ ತೆರಳಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ, ಮನವಿ ಪತ್ರವನ್ನು ನಗರದ ಸಮಸ್ತ ಜೈನ ಸಮಾಜದ ಪರವಾಗಿ ಸಲ್ಲಿಸಲಾಗುವುದು ಎಂದು ಶ್ರೀ ಮಹಾವೀರ ಸಂಘದ ಕಾರ್ಯದರ್ಶಿ ಡಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

error: Content is protected !!