ಚಿತ್ರದುರ್ಗ ಜಿಲ್ಲೆಗೆ ನಿರೀಕ್ಷೆ ಮೀರಿ ಮನ್ನಣೆ ನೀಡಿದ ಬಜೆಟ್: ಚಂದ್ರಪ್ಪ ಸಂತಸ

ಚಿತ್ರದುರ್ಗ, ಜು.9- ಪ್ರತಿ ಬಾರಿ ಪ್ರಸ್ತಾಪ ಆಗಿ ಮರೆಯಾಗುತ್ತಿದ್ದ ಮೆಡಿಕಲ್ ಕಾಲೇಜ್ ಆರಂಭಕ್ಕೆ, ತರಗತಿಗೆ ಪ್ರವೇಶಕ್ಕೆ  ಮುಂದಾಗಿ, ಚಿತ್ರದುರ್ಗ ಜಿಲ್ಲೆಯ ಜನರ ಬಹುದಿನಗಳ ಕನಸನ್ನು ಸಿದ್ದರಾಮಯ್ಯ ನನಸು ಮಾಡಿದ್ದಾರೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷರೂ  ಆದ  ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.  

ಜತೆಗೆ ಮೊಳಕಾಲ್ಮೂರು ರೇಷ್ಮೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಆರಂಭಕ್ಕೆ ಕ್ರಮಕೈಗೊಂಡಿರುವುದು ಸ್ವಾಗತಾರ್ಹ.  ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಬಹುಪಾಲು ಅಂಶಗಳನ್ನು ಮೊದಲ ಬಜೆಟ್‌ನಲ್ಲಿಯೇ ಈಡೇರಿಸುತ್ತಿರುವುದು ಐತಿಹಾಸಿಕ ನಡೆ ಆಗಿದೆ ಎಂದರು.

error: Content is protected !!