ನಗರದಲ್ಲಿ ನಾಡಿದ್ದು ಅಭಿನಯ ಕೇಂದ್ರಿತ ರಂಗ ತರಬೇತಿ ಕಾರ್ಯಾಗಾರ

ದಾವಣಗೆರೆ, ಜು.6- ನಗರದ ಅನ್ವೇಷಕರು ಆರ್ಟ್ ಫೌಂಡೇಶನ್ ವತಿಯಿಂದ ನಾಡಿದ್ದು ದಿನಾಂಕ 8 ಮತ್ತು 9 ರಂದು ಎರಡು ದಿನಗಳ ಕಾಲ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಎ.ಆರ್.ಜಿ. ಕಾಲೇಜು ಆವರಣದಲ್ಲಿ  `ಅಭಿನಯ ಕೇಂದ್ರಿತ ರಂಗ ತರಬೇತಿ’ ಕಾರ್ಯಾಗಾರವನ್ನು ಏರ್ಪಡಿಸ ಲಾಗಿದೆ ಎಂದು ರಂಗ ನಿರ್ದೇಶಕ ಎಸ್.ಎಸ್. ಸಿದ್ಧರಾಜು ತಿಳಿಸಿದ್ದಾರೆ.

16 ವರ್ಷ ಮೇಲ್ಪಟ್ಟ, ನೈಜ ಆಸಕ್ತಿ ಇರುವ ಅಭ್ಯರ್ಥಿಗಳು ನಾಳೆ ದಿನಾಂಕ 7 ರೊಳಗಾಗಿ ಹೆಸರು ನೋಂದಾಯಿಸಬಹುದು. ವಿವರಕ್ಕೆ ಸಂಪರ್ಕಿಸಿ : 9481669521, 7760265930, 9844268176.

ಪ್ರಥಮ ಸರಣಿಯ ಶಿಬಿರವನ್ನು ಮೈಸೂರಿನಲ್ಲಿರುವ ಹೆಸರಾಂತ ರಂಗಕರ್ಮಿ, ರಂಗ ಸಂಘಟಕ, ಚಲನಚಿತ್ರ ನಟ ಮಂಡ್ಯ ರಮೇಶ್ ಅವರ ಸಾರಥ್ಯದಲ್ಲಿ ನಟನ ರಂಗ ಶಾಲೆಯ ಪ್ರಾಂಶುಪಾಲರಾದ ಮೇಘ ಸಮೀರ, ಉಪನ್ಯಾಸಕರಾದ ದಿಶಾ ರಮೇಶ್ ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.

error: Content is protected !!