ದಾವಣಗೆರೆ, ಜು. 6- ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ 80% ಅಂಕ ಗಳಿಸಿರುವ ವಿದ್ಯಾರ್ಥಿನಿಯರಿಗೆ ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ತಂದೆಯನ್ನು ಕಳೆದುಕೊಂಡು ಆರ್ಥಿಕವಾಗಿ ಹಿಂದುಳಿದ ಶೇ. 80ರ ಮೇಲ್ಪಟ್ಟು ಅಂಕ ಪಡೆದ ಹಾಗೂ ಮುಂದಿನ ಶಿಕ್ಷಣವನ್ನು ಸರ್ಕಾರಿ ಕಾಲೇಜಿನಲ್ಲಿ ಮುಂದುವರೆಸುವಂತಹ ಹೆಣ್ಣು ಮಕ್ಕಳು ಮಾತ್ರ ಕರುಣಾ ಜೀವ ಕಲ್ಯಾಣ ಟ್ರಸ್ಟ್, ಮಾಮಾಸ್ ಜಾಯಿಂಟ್ ರಸ್ತೆ, 3ನೇ ಮುಖ್ಯರಸ್ತೆ, 3ನೇ ಅಡ್ಡ ರಸ್ತೆ, ಶಂಕರ್ ಪ್ಲಾಜಾ, ಎಂಸಿಸಿ ಬಿ ಬ್ಲಾಕ್ ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳಿಗೆ 83105 20002ಗೆ ಸಂಪರ್ಕಿಸಬಹುದು.
July 23, 2024