ಜಗಳೂರಿನಲ್ಲಿ ಇಂದು ಆರೋಗ್ಯ ತಪಾಸಣೆ, ಸಮಾಲೋಚನಾ ವೈದ್ಯಕೀಯ ಶಿಬಿರ

ಕೆ.ಎಂ. ಕಲ್ಲಯ್ಯ ಮೆಮೋರಿಯಲ್ ಹೆಲ್ತ್ ಕೇರ್ ಸೆಂಟರ್, ಗೌರವಿ ಆರ್ಕೇಡ್‌ನ 5ನೇ ವಾರ್ಷಿಕೋತ್ಸವನ್ನು ಇಂದು ಮಧ್ಯಾಹ್ನ 12.30 ಕ್ಕೆ ಹಮ್ಮಿಕೊಳ್ಳಲಾಗಿದೆ. ತಪೋಕ್ಷೇತ್ರ  ಕಣ್ವಕುಪ್ಪೆ ಗವಿಮಠದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಟಿ. ಗುರುಸಿದ್ದನಗೌಡರು ವಹಿಸುವರು. 

ಈ ಸಂದರ್ಭದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಬೆಂಗಳೂರಿನ ಐ ವಿ ಎಫ್ ಸಂಸ್ಥೆಯಿಂದ ಬಂಜೆತನ ನಿವಾರಣೆಗೆ, ಸ್ಪೈರ್ ಕ್ಲಿನಿಕ್ ಅವರಿಂದ ಮೊಣಕಾಲು ಮರುಜೋಡಣೆಗೆ, ಚಿತ್ರದುರ್ಗದ ಎಸ್ ಜೆ ಎಂ ಇಂಡಿಯಾನಾದಿಂದ ಹೃದಯ  ಆರೋಗ್ಯಕ್ಕೆ, ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಡಾ. ಟಿ. ಜಿ. ರವಿಕುಮಾರ್ ಅವರು ಸಾಮಾನ್ಯ ರೋಗಗಳಿಗೆ ಮತ್ತು ದಂತ ಚಿಕಿತ್ಸೆಗಳಿಗೆ (ಹಿರಿಯರಿಗೆ ಹಲ್ಲಿನ ಸೆಟ್ ಮತ್ತು ಮಕ್ಕಳಿಗೆ ಉಬ್ಬು ಹಲ್ಲಿಗೆ ಕ್ಲಿಪ್) ಗಳಿಗೆ ಡಾ. ದೀಪಶ್ರೀ ಅವರಿಂದ ಉಚಿತ ತಪಾಸಣೆ ಮತ್ತು ಸಮಾಲೋಚನಾ ವೈದ್ಯಕೀಯ ಶಿಬಿರ ಮತ್ತು ಕರ್ನಾಟಕ ಹಿಮೊಫಿಲಿಯಾ ಸೊಸೈಟಿ  ಮತ್ತು ಲೈಫ್ ಲೈನ್ ಬ್ಲಡ್ ಬ್ಯಾಂಕ್ ದಾವಣಗೆರೆ ಇವರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ ಎಂದು ಕೇಂದ್ರದ ವೈದ್ಯ ಡಾ.ಹಾಲಸ್ವಾಮಿ ವಿ.ಕಂಬಾಳಿಮಠ್ ತಿಳಿಸಿದ್ದಾರೆ.

error: Content is protected !!