ಸಿರಿಗೆರೆಯಲ್ಲಿ ಇಂದು ಉಪನ್ಯಾಸ

ಸಿರಿಗೆರೆಯಲ್ಲಿ ಇಂದು ಉಪನ್ಯಾಸ

ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಮುಂಬಯಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ. ಶಿವಾನಂದ ಕಣವಿಯವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು.

ಇದೇ ಸಂದರ್ಭದಲ್ಲಿ ಶಿವಾನಂದ ಕಣವಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಲಿದ್ದಾರೆ. ಕನ್ನಡದ ಸುಪ್ರಸಿದ್ಧ ಕವಿ ಚೆನ್ನವೀರ ಕಣವಿಯವರ ಪುತ್ರರಾದ ಶಿವಾನಂದ ಕಣವಿ ಅವರು ಟಿಸಿಎಸ್ ನ ಮಾಜಿ ಉಪಾಧ್ಯಕ್ಷರು. ಪ್ರಸ್ತುತ ಬೆಂಗಳೂರಿನ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ (ಎನ್ ಐ ಎ ಎಸ್) ಅಡ್ಜಂಕ್ಟ್ ಫ್ಯಾಕಲ್ಟಿ ಆಗಿದ್ದಾರೆ.

`ಸ್ಯಾಂಡ್ ಟು ಸಿಲಿಕಾನ್ ದಿ ಅಮೇಜಿಂಗ್ ಸ್ಟೋರಿ ಆಫ್ ಡಿಜಿಟಲ್  ಟೆಕ್ನಾಲಜಿ’ ಇವರ ಪ್ರಮುಖ ಕೃತಿಯಾಗಿದೆ. ಇದರಲ್ಲಿ ತಂತ್ರಜ್ಞಾನದ ವಿಕಾಸ ಮತ್ತು ಭಾರತೀಯರು ಅದಕ್ಕೆ ನೀಡಿದ ಮೂಲ ಕೊಡುಗೆಗಳ ಬಗ್ಗೆ ಆಳವಾಗಿ ಸಂಶೋಧಿಸಿ ಬರೆದಿದ್ದಾರೆ. ‘ಬ್ಯುಸಿನೆಸ್ ಆಫ್ ಇಂಡಿಯಾ’ ನಿಯತಕಾಲಿಕದ   ಸಂಪಾದಕ ಸಲಹೆಗಾರರಾಗಿದ್ದಾರೆ. 

error: Content is protected !!