ಹೆಂಡತಿ ಹತ್ಯೆ : ಗಂಡನಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ, ಜೂ.30- ಹೆಂಡತಿ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಗಂಡನಿಗೆ ನ್ಯಾಯಾಲಯ  ಜೀವಾವಧಿ  ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿದೆ.  19/02/2020 ರಂದು ಅಮರಾವತಿ ಗ್ರಾಮದ ಮಲ್ಲಿಕಾರ್ಜುನ ಬಡಾವಣೆಯ ಆರೋಪಿ 54 ವರ್ಷದ  ಮರಿಯಪ್ಪ  ಎಂಬಾತ  ಕುಡಿದು ಬಂದು  ಮನೆಯಲ್ಲಿ ಹೆಂಡತಿ ಸೌಭಾಗ್ಯಮ್ಮ ಜೊತೆ ಕುಡಿಯು ವುದಕ್ಕೆ ಹಣ ಕೊಡಲಿಲ್ಲ ಎಂದು  ಜಗಳ ಮಾಡಿದ್ದು, ನಂತರ  ಲೈಂಗಿಕ ಕ್ರಿಯೆಗೆ ಸಹಕಾರ ಮಾಡದೇ ಇದ್ದುದರಿಂದ, ಇದೇ ವಿಚಾರಕ್ಕೆ  ಬೇಜಾರು ಮಾಡಿಕೊಂಡು, ಅದೇ ದಿನ ಮನೆಯಲ್ಲಿ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. 

ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸದರಿ ಕೊಲೆ ಪ್ರಕರಣವನ್ನು ಹರಿಹರ ಸಿಪಿಐ ಸತೀಶಕುಮಾರ್  ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.  6-06-2023  ರಂದು ದಾವಣಗೆರೆ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ   ಜೆ.ವಿ.ವಿಜಯಾನಂದ ಅವರು ಆರೋಪಿಗೆ ಈ ಶಿಕ್ಷೆ ವಿಧಿಸಿ ದ್ದಾರೆ. ಸರ್ಕಾರಿ ಅಭಿಯೋಜಕ ಸತೀಶ್ ವಾದ ಮಂಡಿಸಿದ್ದರು.

error: Content is protected !!