ಇಂದು ಶಾಲಾ ಮಂತ್ರಿ ಮಂಡಲದ ಪ್ರತಿಜ್ಞಾ ಸ್ವೀಕಾರ, ವಿದ್ಯಾರ್ಥಿ ಸಂಘದ ಉದ್ಘಾಟನೆ

ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭವು ಇಂದು ಬೆಳಿಗ್ಗೆ 10.30 ಕ್ಕೆ ಶಾಲಾ ಆವರಣದಲ್ಲಿರುವ ಪ್ರಶಾಂತಿ ಸಭಾಂಗಣದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಶ್ರೀಮತಿ ಸುಜಾತ ಕೃಷ್ಣ ಕೆ.ಆರ್‌. ವಹಿಸುವರು. ಮುಖ್ಯ ಅತಿಥಿಯಾಗಿ ವಾಮದೇವಪ್ಪ ಬಿ. ಆಗಮಿಸುವರು. ಕಾರ್ಯಕ್ರಮದಲ್ಲಿ ಜಿ.ಆರ್‌. ವಿಜಯಾನಂದ್‌, ಶ್ರೀಮತಿ ಎ.ಆರ್‌. ಉಷಾ ರಂಗನಾಥ್‌, ಶ್ರೀಮತಿ ಸುಜಾತ ಎ.ಪಿ., ಶ್ರೀಮತಿ ಸುಜಾತ ಕೆ.ವಿ. ಉಪಸ್ಥಿತರಿರುವರು.

error: Content is protected !!