ಜುಲೈ 16ರಂದು ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆ

ದಾವಣಗೆರೆ, ಜೂ.25- ನಗರದ ಸಹಕಾರಿ ಬ್ಯಾಂಕುಗಳಲ್ಲೊಂದಾದ ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ 15 ಸ್ಥಾನಗಳಿಗೆ ಬರುವ ಜುಲೈ 16ರ ಭಾನುವಾರ ಚುನಾವಣೆ ನಡೆಯಲಿದೆ.

ಬರುವ ಜುಲೈ 1 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜುಲೈ 8 ರಂದು ಉಮೇದುವಾರಿಕೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ದಿನಾಂಕ 9ರಂದು ನಾಮಪತ್ರಗಳ ಪರಿಶೀಲನೆ, ದಿನಾಂಕ 10 ರಂದು ನಾಮ ಪತ್ರವನ್ನು ವಾಪಸ್ ಪಡೆಯಲು ಅಂತಿಮ ದಿನವಾಗಿದೆ.

ಸ್ಥಳೀಯ ಶ್ರೀ ಡಿ.ದೇವರಾಜ ಅರಸು ಬಡಾವಣೆ ಬಿ ವಿಭಾಗದಲ್ಲಿರುವ ಶ್ರೀ  ಕೃಷ್ಣ ಭವಾನಿ ಕಲ್ಯಾಣ ಮಂಟಪದಲ್ಲಿ ಜುಲೈ 16ರಂದು ಚುನಾವಣೆ  ಜರುಗಲಿದ್ದು,  ಅಂದೇ ಮತಗಳ ಎಣಿಕೆ ಕಾರ್ಯ ನಡೆದು, ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಚುನಾವಣಾಧಿಕಾರಿಯಾಗಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕ ಎಲ್. ಸತೀಶ್ ನಾಯ್ಕ ತಿಳಿಸಿದ್ದಾರೆ.

error: Content is protected !!