ದಾವಣಗೆರೆ, ಜೂ. 22- ಬೀಡಿ ಕಾರ್ಮಿಕರ ಕನಿಷ್ಟ ಕೂಲಿ ಪರಿಷ್ಕರಿಸಿ, ಬದುಕಲು ಅವರಿಗೆ ಯೋಗ್ಯ ಕೂಲಿಯನ್ನು ನಿಗದಿಗೊಳಿಸುವಂತೆ ಕರ್ನಾ ಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ (ಸಿಐ ಟಿಯು) ಸರ್ಕಾರವನ್ನು ಒತ್ತಾಯಿಸಿದೆ. ಲಕ್ಷಾಂತರ ಸಂಖ್ಯೆಯಲ್ಲಿರುವ ಬಡ ಬೀಡಿ ಕಾರ್ಮಿಕರು ಕನಿಷ್ಟ ಕೂಲಿ ಇಲ್ಲದೇ ಪರಿತಪಿಸುವಂತಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಅಶ್ಫಾಕ್ ಅಹಮದ್ ಹಾಗೂ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜ್ ತಿಳಿಸಿದ್ದಾರೆ. ಕೂಡಲೇ ಬೀಡಿ ಕಾರ್ಮಿಕರ ಕನಿಷ್ಟ ವೇತನವನ್ನು ಪರಿಷ್ಕರಣೆೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.
July 26, 2024