5 ಸಾವಿರ ಅಡಿಕೆ ಸಸಿಗಳು ನಾಶ

ದಾವಣಗೆರೆ, ಜು. 21- ಸಂತೇ ಬೆನ್ನೂರು ತಾಲ್ಲೂಕು ದೊಡ್ಡಬ್ಬಿಗೆರೆ ಜಮೀ ನಿನಲ್ಲಿದ್ದ 5 ಸಾವಿರ ಅಡಿಕೆ ಸಸಿಗಳನ್ನು ಕಿತ್ತು ನಾಶ ಮಾಡಿರುವ ಘಟನೆ ಸೋಮವಾರ ನಡೆದಿದೆ. ಹರೀಶ್ ಜೆ.ಟಿ. ಎಂಬುವವರಿಗೆ ಸೇರಿದ 1.25 ಲಕ್ಷ ರೂ. ಮೌಲ್ಯದ ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ನಾಶ ಪಡಿಸಿ ದ್ದಾರೆ. ಈ ಕುರಿತು ಸಂತೇಬೆನ್ನೂರು ಪೊ ಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!