ರಾಜನಹಳ್ಳಿ ಮಠಕ್ಕೆ ಸಚಿವ ಖಂಡ್ರೆ ಭೇಟಿ : ವನ ಮಹೋತ್ಸವ ಆಚರಣೆ

ರಾಜನಹಳ್ಳಿ ಮಠಕ್ಕೆ ಸಚಿವ ಖಂಡ್ರೆ ಭೇಟಿ : ವನ ಮಹೋತ್ಸವ ಆಚರಣೆ

ಮಲೇಬೆನ್ನೂರು, ಜೂ.20- ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು  ರಾಜನಹಳ್ಳಿ ವಾಲ್ಮೀಕಿ ಗುರು ಪೀಠಕ್ಕೆ ಮೊನ್ನೆ ಆಗಮಿಸಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. 

ಇದಕ್ಕೂ ಮುನ್ನ ಸಚಿವರು, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದ ಪುರಿ ಶ್ರೀಗಳವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಚಿವರು, ಶ್ರೀಗಳ ಸಾನ್ನಿಧ್ಯದಲ್ಲಿ ಮಠದ ಆವರಣದಲ್ಲಿ ವಿವಿಧ ತಳಿಗಳ ಸಸಿಗಳನ್ನು ನೆಟ್ಟು, ವನ ಮಹೋತ್ಸವ ಆಚರಿಸಿದರು.

ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಧರ್ಮದರ್ಶಿಗಳಾದ ಹರ್ತಿಕೋಟಿ ವೀರೇಂದ್ರ ಸಿಂಹ, ಕೆ.ಬಿ.ಮಂಜುನಾಥ್, ಜಿಗಳಿ ರಂಗಪ್ಪ, ರಾಜನಹಳ್ಳಿ ಭೀಮಣ್ಣ, ಕೆ.ಬೇವಿನಹಳ್ಳಿ ಹಾಲೇಶ್, ಸಲಗನಹಳ್ಳಿ ವಿಜಯಕುಮಾರ್, ವಕೀಲರಾದ ಪ್ರಕಾಶ್ ಮತ್ತು ಉಪಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರರಾವ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ನಾಯಕ, ಹರಿಹರದ ವಲಯ ಅರಣ್ಯಾಧಿಕಾರಿ ಶ್ವೇತಾ ಹಾಗೂ ಇತರರು ಈ ವೇಳೆ ಹಾಜರಿದ್ದರು.

error: Content is protected !!