ವಿದ್ಯುತ್‌ ಬೆಲೆ ಹೆಚ್ಚಳ ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಬಲ

ದಾವಣಗೆರೆ, ಜೂ. 20 – ವಿದ್ಯುಚ್ಛಕ್ತಿಯ ಬೆಲೆಗಳಲ್ಲಿ ಅವೈಜ್ಞಾನಿಕ ಹೆಚ್ಚಳ ಖಂಡಿಸಿ ಇದೇ ದಿನಾಂಕ 22ರ ಗುರುವಾರ ಕರ್ನಾಟಕ ಬಂದ್ ಆಚರಣೆ ಮಾಡಲು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೀಡಿರುವ ಕರೆಯನ್ನು  ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು   ಬೆಂಬಲಿಸಿದೆ.

ವಿದ್ಯುಚ್ಛಕ್ತಿಯ ಬೆಲೆಗಳಲ್ಲಿನ ಹೆಚ್ಚಳದಿಂದ ಎಲ್ಲಾ ರೀತಿಯ ಗ್ರಾಹಕರಿಗೂ ಹೊರೆಯಾಗಲಿದ್ದು, ಸಾರ್ವಜನಿಕರು, ಎಲ್ಲಾ ಉಧ್ಯಮಗಳು ಮತ್ತು ಕೈಗಾರಿಕೆಗಳು ತಮ್ಮ ವಹಿವಾಟನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಬಂದ್‌ಗೆ ಸಹಕಾರ ನೀಡಬೇಕು.  ಸರ್ಕಾರ ಈ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಒತ್ತಾಯಿಸಿದ್ದಾರೆ.

error: Content is protected !!