ದಾವಣಗೆರೆ, ಜೂ. 18- ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಬೀರೇಶ (24) ಹಾಗೂ ಕಾವ್ಯ ಬಂಧಿತರು. ತನ್ನ ಪತ್ನಿ ಕಾವ್ಯ ಬೀರೇಶ ಎಂಬುವವನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಓಡಿ ಹೋಗಿದ್ದಾರೆ ಎಂದು ಹದಡಿ ಠಾಣೆಯಲ್ಲಿ ಕಾವ್ಯಳ ಪತಿ ನಿಂಗರಾಜು ಇತ್ತೀಚೆಗೆ ದೂರು ನೀಡಿದ್ದರು. ಪೊಲೀಸರು ಕಾವ್ಯಳನ್ನು ಪತ್ತೆ ಮಾಡಿ ಪ್ರಕರಣವನ್ನು ಮುಕ್ತಾಯ ಗೊಳಿಸಿದ್ದರು. ಆದರೆ ನಿಂಗರಾಜನನ್ನು ಕೊಲೆ ಮಾಡಲಾಗಿದೆ ಎಂದು ತಾಯಿ ಶಿವಲಿಂಗಮ್ಮ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಬೀರೇಶ ಹಾಗೂ ಕಾವ್ಯಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದಾಗ, ತಮ್ಮ ಅನೈತಿಕ ಸಂಬಂಧಕ್ಕೆ ನಿಂಗ ರಾಜನು ಅಡ್ಡಿ ಪಡಿಸುತ್ತಾನೆಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
July 25, 2024