ಮಹಾಮಹಿಮರೂ, ತಪಸ್ವಿಗಳೂ ಆದ ಪರಮಪೂಜ್ಯ ಶ್ರೀಮದ್ ಅಥಣಿ ಮುರುಘೇಂದ್ರ ಶಿವಯೋಗಿಗಳವರ 188ನೇ ಜಯಂತ್ಯುತ್ಸವ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಶ್ರೀ ಶಿವಯೋಗಾಶ್ರಮದಲ್ಲಿ ನಡೆಯಲಿದೆ. ಶ್ರೀ ಶಿವಯೋಗೀಶ್ವರ ಸಾಂಸ್ಕೃತಿಕ ಭಜನಾ ಸಂಘದ ವತಿಯಿಂದ ಏರ್ಪಾಡಾಗಿರುವ ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಹಿಸಲಿದ್ದಾರೆ. ಅಂದು ಉಭಯ ಗದ್ದುಗೆಯಲ್ಲಿ ವಚನಾಭಿಷೇಕ, 6.30 ರಿಂದ ಸಾಮೂಹಿಕ ಭಜನೆ, ಶ್ರೀಗಳಿಂದ ಆಶೀರ್ವಚನ ಸರಳವಾಗಿ ನಡೆಯಲಿದೆ.
July 27, 2024