ನಗರದಲ್ಲಿ ಇಂದು ಅಥಣಿ ಮುರುಘೇಂದ್ರ ಶಿವಯೋಗಿಗಳವರ ಜಯಂತ್ಯುತ್ಸವ

ನಗರದಲ್ಲಿ ಇಂದು ಅಥಣಿ ಮುರುಘೇಂದ್ರ ಶಿವಯೋಗಿಗಳವರ ಜಯಂತ್ಯುತ್ಸವ - Janathavaniಮಹಾಮಹಿಮರೂ, ತಪಸ್ವಿಗಳೂ ಆದ  ಪರಮಪೂಜ್ಯ ಶ್ರೀಮದ್‌ ಅಥಣಿ ಮುರುಘೇಂದ್ರ ಶಿವಯೋಗಿಗಳವರ 188ನೇ ಜಯಂತ್ಯುತ್ಸವ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಶ್ರೀ ಶಿವಯೋಗಾಶ್ರಮದಲ್ಲಿ ನಡೆಯಲಿದೆ.  ಶ್ರೀ ಶಿವಯೋಗೀಶ್ವರ ಸಾಂಸ್ಕೃತಿಕ ಭಜನಾ ಸಂಘದ ವತಿಯಿಂದ ಏರ್ಪಾಡಾಗಿರುವ ಈ ಕಾರ್ಯಕ್ರಮದ ಸಾನ್ನಿಧ್ಯವನ್ನು  ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಹಿಸಲಿದ್ದಾರೆ. ಅಂದು ಉಭಯ ಗದ್ದುಗೆಯಲ್ಲಿ ವಚನಾಭಿಷೇಕ, 6.30 ರಿಂದ ಸಾಮೂಹಿಕ ಭಜನೆ, ಶ್ರೀಗಳಿಂದ ಆಶೀರ್ವಚನ ಸರಳವಾಗಿ ನಡೆಯಲಿದೆ.

error: Content is protected !!