ಕನ್ನಡಿಗರನ್ನು ರಂಜಿಸುತ್ತಿರುವ ಸಿರಿಕನ್ನಡ ವಾಹಿನಿ

ದಾವಣಗೆರೆ, ಜೂ. 16 – ಸಿರಿಕನ್ನಡ ವಾಹಿನಿ ಕ್ರಿಯಾತ್ಮಕ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನೆ ಮನ ರಂಜಿಸುತ್ತಿದೆ. ಹೆಸರಾಂತ ಹಾಸ್ಯ ಕಲಾವಿದ ಹಿತೇಶ್, ಜನಪ್ರಿಯ ನಿರೂಪಕಿ ಹೇಮಾ ಅವರ ನಿರೂಪಣೆಯಲ್ಲಿ, ತ್ಯಾಗರಾಜ್ ಅವರ ಸಾರಥ್ಯದಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಸಖತ್ ಜೋಡಿ  ಕಾರ್ಯಕ್ರಮವು ಈಗಾಗಲೇ ಹೆಂಗಳೆಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಸಖತ್ ಜೋಡಿ ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರು ಭಾಗವಹಿಸಬಹುದು. ಈಗಾಗಲೇ ಸ್ಯಾಂಡಲ್‍ವುಡ್ ಹಾಗೂ ಕಿರುತೆರೆಯ ಜನಪ್ರಿಯ ಕಲಾವಿದರು ಭಾಗವಹಿಸಿದ್ದಾರೆ.   

ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ಪುತ್ರ ಪಂಕಜ್ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ಊರ್ಮಿಳ  ಧಾರಾವಾಹಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30 ಕ್ಕೆ ಪ್ರಸಾರವಾಗುತ್ತಿದೆ. 

ನಿರ್ದೇಶಕ ರವಿ ಗರಣಿ ಅವರ ಕಥೆ, ಸಂಜೀವ್ ತಗಡೂರ್ ನಿರ್ದೇಶನದ, ಹೆತ್ತ ಮಗಳೇ ಸೊಸೆಯಾಗಿ ಬರುವ ವಿಭಿನ್ನ ಕಥಾ ಹಂದರದ ಅದ್ಧೂರಿ ಧಾರಾವಾಹಿ ಬ್ರಾಹ್ಮಿನ್ಸ್ ಕೆಫೆ ರಾತ್ರಿ 9.30 ಕ್ಕೆ ಪ್ರಸಾರವಾಗುತ್ತಿದ್ದು, ಕೆಲವೇ ದಿನಗಳಲ್ಲಿ ವೀಕ್ಷಕರ ಮನಸೂರೆಗೊಂಡಿದೆ ಎಂದು ಸಿರಿಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ ಅವರು ತಿಳಿಸಿದ್ದಾರೆ.

ಸಿರಿಕನ್ನಡ ವಾಹಿನಿಯನ್ನು ತಪ್ಪದೇ ನೋಡುವ ವೀಕ್ಷಕರು ಇದೇ ಜೂನ್ 15 ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಟಿವಿ, ರೆಫ್ರಿಜರೇಟರ್, ವಾಷಿಂಗ್‍ಮೆಷಿನ್, ಇತ್ಯಾದಿ ಆಕರ್ಷಕ ಬಹುಮಾನಗಳನ್ನು ಕೇವಲ ಮಿಸ್ ಕಾಲ್ ಕೊಡುವ ಮೂಲಕ ಸುಲಭವಾಗಿ ತಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ವಾಹಿನಿಯನ್ನು ವೀಕ್ಷಿಸಬೇಕೆಂದು ವಾಹಿನಿಯ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಅವರು ಹೇಳಿದ್ದಾರೆ.

error: Content is protected !!