ನಗರದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ದಾವಣಗೆರೆ, ಜೂ. 13- ಕುಂದುವಾಡ ಗ್ರಾಮದ ಸಮೀಪದ ಬಿ.ಸಿ.ಎಂ. ಹಾಸ್ಟೆಲ್ ಬಳಿ ನೇಣು ಹಾಕಿಕೊಂಡು ಅಂತಿಮ ವರ್ಷದ ಬಿ.ಸಿ.ಎ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.

ಸುದೀಪ್ ಗೌಡ (21) ಮೃತ ವಿದ್ಯಾರ್ಥಿಯಾಗಿದ್ದು,  ಹಿರಿಯೂರು ತಾಲ್ಲೂಕು ದಿಂಡಾವರ ಗ್ರಾಮದ ಈತ ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದ.  

ಈತ ಸೋಮವಾರ ಹಾಸ್ಟೆಲ್ ಸಮೀಪದ ಬಾತಿ ಕಡೆ ಹೋಗುವ ಮಾರ್ಗದಲ್ಲಿ ಗಸಗಸೆ ಮರಕ್ಕೆ ಬೆಡ್‌ಶೀಟ್ ಬಟ್ಟೆಯಿಂದ ನೇಣು ಹಾಕಿಕೊಂಡಿದ್ದು, ಮೃತನ ಸಾವಿನ ಬಗ್ಗೆ ಅನುಮಾನವಿದೆ.  ಕ್ರಮ ಕೈಗೊಳ್ಳುವಂತೆ ತಂದೆ ಕುಮಾರ್ ಪಿ. ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

error: Content is protected !!