ದಾವಣಗೆರೆ, ಜೂ.9- ನಗರದ ಪಿ.ಜೆ. ಬಡಾವಣೆಯ ಹೋಟೆಲ್ ಒಂದರಲ್ಲಿ ಮಂಡಕ್ಕಿ ತಿಂದು, ಹೊಟ್ಟೆ ತೊಳಸಿದಂತಾಗಿ ವಾಂತಿ ಮಾಡಿಕೊಂಡು, ನಂತರ ಮಂಡಕ್ಕಿಯಲ್ಲಿ ಹಲ್ಲಿ ಬಿದ್ದಿರುವುದು ತಿಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ಗುರುವಾರ ಬೆಳಿಗ್ಗೆ ನಡೆದಿದ್ದು, ಹೋಟೆಲ್ ಮಾಲೀಕರ ಮೇಲೆ ತೋಳಹುಣಸೆ ಗ್ರಾಮದ ಶೇಖರಪ್ಪ ಎಂಬುವವರು ದಾವಣಗೆರೆ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
July 23, 2024