ಎಲೆಬೇತೂರಿನ ಶಾಲಾ ಪ್ರಾರಂಭೋತ್ಸವಕ್ಕೆ ಡಯಟ್ ಪ್ರಾಂಶುಪಾಲರ ಪ್ರಶಂಸೆ

ಎಲೆಬೇತೂರಿನ ಶಾಲಾ ಪ್ರಾರಂಭೋತ್ಸವಕ್ಕೆ ಡಯಟ್ ಪ್ರಾಂಶುಪಾಲರ ಪ್ರಶಂಸೆ - Janathavaniದಾವಣಗೆರೆ, ಜೂ. 6 – ತಾಲ್ಲೂಕಿನ ಎಲೆಬೇತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸ ವದ ಪರಿಶೀಲನೆಗೆ ಆಗಮಿಸಿದ್ದ ಡಯಟ್ ಪ್ರಾಂಶುಪಾಲರಾದ ಗೀತಾ ಅವರನ್ನು ಮುಖ್ಯ ಶಿಕ್ಷಕರು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಜನಪ್ರತಿನಿಧಿ ಗಳು, ಗ್ರಾಮದ ಮುಖಂಡರು ಹಾಜರಿದ್ದು, ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ ಗಳನ್ನು ಮಾಡಿಕೊಂಡು, ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿ, ಬರಮಾಡಿಕೊಂಡರು. 

ಶಾಲಾ ಆವರಣ, ಅಡುಗೆ ಕೋಣೆ, ಶೌಚಾ ಲಯ ಸ್ವಚ್ಛತೆ ಕುಡಿಯುವ ನೀರಿಗೆ ಆದ್ಯತೆ ಯನ್ನು ಕೊಟ್ಟಿದ್ದಾರೆ. ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಿ ಸಿದ್ಧತೆ ಮಾಡಿಕೊಂಡಿದ್ದು ಶಾಲೆಗೆ ಮಕ್ಕಳನ್ನು ಬರಮಾಡಿಕೊಂಡರು. 

ಮಕ್ಕಳಿಗೆ ಪಠ್ಯ-ಪುಸ್ತಕಗಳನ್ನು ನೀಡಿದ್ದಾರೆ. ಶಿಕ್ಷಕರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕ್ರಿಯಾಯೋಜನೆಗಳನ್ನು ಮತ್ತು ವೇಳಾಪಟ್ಟಿ ಸಹ ಸಿದ್ಧ ಮಾಡಿಕೊಂಡಿರುವುದು, ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ಬಸವನಗೌಡಪ್ಪ, ಸದಸ್ಯರಾದ ಬಿ.ಶಿವಕುಮಾರ್, ಹಂಚಿನಮನೆ ಚೇತನ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಂಪುರ ನಾಗರಾಜ್, ಶಾಲಾ ಶಿಕ್ಷಣ ಪ್ರೇಮಿ, ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ, ಜಿ.ಪಂ. ಮಾಜಿ ಸದಸ್ಯ ಬಿ. ಕರಿಬಸಪ್ಪ, ಕಾಡಾ ಸಮಿತಿ ಮಾಜಿ ಸದಸ್ಯ ಎಚ್. ಬಸವರಾಜಪ್ಪ, ದಾಮ್‌ ಕೋಸ್ ನಿರ್ದೇಶಕ ಮಠದ ಬಸವರಾಜಯ್ಯ, ಮುಖ್ಯೋಪಾಧ್ಯಾ ಯಿನಿ ಬಿ. ಸುಜಾತ, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

error: Content is protected !!