27ರಂದು ನಗರದಲ್ಲಿ ಶ್ರೀ ಜಗನ್ನಾಥ ರಥಯಾತ್ರೆ

 ದಾವಣಗೆರೆ, ಜೂ.6- ನಗರದಲ್ಲಿ ಇದೇ  ದಿನಾಂಕ 27ರಂದು ದ್ವಿತೀಯ ಬಾರಿಗೆ ಶ್ರೀ ಜಗನ್ನಾಥ ರಥಯಾತ್ರೆ ಮಹಾ ಮಹೋತ್ಸವ ಜರುಗಲಿದೆ. ಅಂತರರಾಷ್ಟ್ರೀಯ ಕೃಷ್ಣ ಭಾವನಾತ್ಮಕ ಸಂಘ (ಇಸ್ಕಾನ್) ದಾವಣಗೆರೆ ಸಂಸ್ಥಾಪಕಾಚಾರ್ಯ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದಗಳ ನೇತೃತ್ವದಲ್ಲಿ ಜರುಗಲಿದೆ ಎಂದು ದಾವಣಗೆರೆ ಇಸ್ಕಾನ್ ಸಂಸ್ಥೆ ಮುಖ್ಯಸ್ಥರಾದ ಅವಧೂತ ಚಂದ್ರಹಾಸ ತಿಳಿಸಿದ್ದಾರೆ.

error: Content is protected !!