ಸುಲಿಗೆ ಪ್ರಕರಣದಲ್ಲಿ ಮೂವರ ಬಂಧನ : 1.70 ಲಕ್ಷ ರೂ. ಮೌಲ್ಯದ ಸ್ವತ್ತುಗಳ ವಶ

ದಾವಣಗೆರೆ, ಜೂ.3- ಆವರಗೆರೆಯಿಂದ ಬಾಡಾ ಕ್ರಾಸ್ ಅಂಡರ್ ಬ್ರಿಡ್ಜ್ ಕಡೆಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯಿಂದ ಮೊಬೈಲ್ ಹಾಗೂ ನಗದು ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

 ಹೆಚ್.ಸಿ ಸಂದೀಪ್ (24) ಐಗೂರು ಗ್ರಾಮ, ಪ್ರವೀಣ್ ಕುಮಾರ್ (34)  ದೇವರಾಜ ಅರಸು ಬಡಾವಣೆ, ‘ಬಿ’ ಬ್ಲಾಕ್,   ಅವಿನಾಶ್ ಎ.  (30)  ಡೆಂಟಲ್ ಕಾಲೇಜ್ ರಸ್ತೆ, ಎಂಸಿಸಿ ‘ಬಿ’ ಬ್ಲಾಕ್ ದಾವಣಗೆರೆ ಇವರು ಬಂಧಿತರು.

ಬಂಧಿತ ಆರೋಪಿಗಳಿಂದ ಸುಲಿಗೆ ಮಾಡಲಾಗಿದ್ದ 10 ಸಾವಿರ ರೂ. ಮೌಲ್ಯದ ಇನ್ಫಿನಿಟಿ ಮೊಬೈಲ್, 200 ರೂ. ನಗದು ಹಾಗೂ ಮತ್ತೊಂದು ಸ್ಥಳದಲ್ಲಿ
ಕಿತ್ತುಕೊಂಡು ಹೋಗಿದ್ದ 10 ಸಾವಿರ  ಬೆಲೆಯ ವಿವೋ ಕಂಪನಿ ಮೊಬೈಲ್, ಕೃತ್ಯಕ್ಕೆ ಉಪಯೋಗಿಸಿದ  ಡಿಯೋ ಸ್ಕೂಟರ್, ಪ್ಯಾಸೆಂಜರ್ ಆಟೋ ಸೇರಿ ಒಟ್ಟು 1.70 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾತ್ರಿ 8 ಗಂಟೆ ಸಮಯದಲ್ಲಿ ಬಾಡಾ ಕ್ರಾಸ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಯಾರೋ ಮೂವರು ವ್ಯಕ್ತಿಗಳು ಮೊಬೈಲ್ ಹಾಗೂ 500 ರೂ. ಹಣ ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ಸಂಜು ಎಂಬುವವರು ಕಳೆದ ಮೇ 31ರಂದು ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

error: Content is protected !!