ಹೊಳಲ್ಕೆರೆ : ಕಾಂಗ್ರೆಸ್ ಸಂಘಟನಾ ಸಭೆ

ಹೊಳಲ್ಕೆರೆ : ಕಾಂಗ್ರೆಸ್ ಸಂಘಟನಾ ಸಭೆ - Janathavaniಹೊಳಲ್ಕೆರೆ, ಜೂ. 1- ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಿರೀಕ್ಷಿತ ಸೋಲು ಆಗಿದ್ದು, ಈ ಕುರಿತು ಚರ್ಚೆ ಹಾಗೂ ಪಕ್ಷದ ಸಂಘಟನಾ ಸಭೆಯನ್ನು ನಾಡಿದ್ದು ದಿನಾಂಕ 3ರ ಶನಿವಾರ ಬೆಳಗ್ಗೆ 10.30ಕ್ಕೆ ಹೊಳಲ್ಕೆರೆ ಗಣಪತಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ತಿಳಿಸಿದ್ದಾರೆ.

ರಾಜ್ಯದಲ್ಲಿ‌ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಪಕ್ಷಕ್ಕೆ ಜನ ಬಹುಮತ ನೀಡಿದ್ದಾರೆ. ಆದರೆ, ಹೊಳಲ್ಕೆರೆ ಕ್ಷೇತ್ರದಲ್ಲಿ ಕಾರ್ಯಕರ್ತರ ಹೋರಾಟ, ಶ್ರಮದ ಮಧ್ಯೆಯೂ ಕಡಿಮೆ ಮತಗಳ ಅಂತರದಲ್ಲಿ ನನಗೆ ಸೋಲು ಆಗಿದೆ. ಈ ಕುರಿತು ಚಿಂತನೆ ಹಾಗೂ ಬರುವ ಜಿಲ್ಲಾ-ತಾಲ್ಲೂಕು ಪಂಚಾಯತ್, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಂಘಟನೆ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಗಿದೆ.

ಸಮಾಜ ಕಲ್ಯಾಣ ಸಚಿವನಾಗಿ ಐದು ವರ್ಷ ಆಡಳಿತ ನಡೆಸಲು ಅವಕಾಶ ಕೊಟ್ಟ ಕ್ಷೇತ್ರದ ಜನರು ಈ ಬಾರಿಯೂ ನನ್ನ ಗೆಲುವು ಖಚಿತ ಎಂದೇ ಭಾವಿಸಿದ್ದರು. 

ಆದರೆ, ಬೆರಳೆಣಿಕೆಯ ಪಕ್ಷದ್ರೋಹಿಗಳ ಕುತಂತ್ರ ಹಾಗೂ ಬಿಜೆಪಿ ಅಭ್ಯರ್ಥಿ ಮತ್ತು ಆತನ ಇಡೀ ಕುಟುಂಬದ ಸದಸ್ಯರು ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸುವ ಜೊತೆಗೆ ದೇವರ ಭಾವಚಿತ್ರಗಳನ್ನೇ ದುರ್ಬ ಳಕೆ ಮಾಡಿಕೊಂಡಿದ್ದರಿಂದ ನನಗೆ ಸೋಲು ಆಗಿದೆ. ಈ ಸೋಲು ನನಗಿಂತಲೂ ಪಕ್ಷದ ನಿಷ್ಠಾವಂತರು, ಮುಖಂಡರು, ಅಭಿಮಾನಿ ಗಳಲ್ಲಿ ಆಘಾತ ಉಂಟು ಮಾಡಿರುವುದು ವಾಸ್ತವ ಸತ್ಯ ಎಂದು ಅವರು ಹೇಳಿದ್ದಾರೆ.

error: Content is protected !!