ಶ್ರೀ ಗಾಯತ್ರಿ ಪರಿವಾರದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ದಾವಣಗೆರೆ, ಮೇ 21- ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಅಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ  ಜುಲೈ 23 ರಂದು ಭಾನುವಾರ ನಗರದ ಎಂ.ಸಿ.ಸಿ `ಬಿ’ ಬ್ಲಾಕ್‍ನ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ  ಶ್ರೀ ಗಾಯತ್ರಿ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ದಾವಣಗೆರೆ ಗೌಡಸಾರಸ್ವತ ಸಮಾಜದ ಸಹಯೋಗದಲ್ಲಿ ಅಪರೂಪದ ಈ ಅಧ್ಯಾತ್ಮಿಕ ಕಾರ್ಯಕ್ರಮ ಲೋಕ ಕಲ್ಯಾಣಕ್ಕಾಗಿ ಆಯೋಜಿಸಿದ್ದು ಯಾವುದೇ ಜಾತಿ, ಮತ, ಭೇದವಿಲ್ಲದೇ ಸಾರ್ವಜನಿಕರು ಯಾರಾದರೂ ಭಾಗವಹಿಸಬಹುದು ಎಂದು ಪರಿವಾರದ ಅಧ್ಯಕ್ಷರಾದ ಡಾ|| ಸುಶೀಲಮ್ಮ ತಿಳಿಸಿದ್ದಾರೆ.   ಶ್ರೀ ಗಾಯತ್ರಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಗಳಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗೆ 9535854421, 9845277088, 9342441194 ಈ ಸನಿಹವಾಣಿಗಳಿಗೆ ಸಂಪರ್ಕಿಸಬಹುದು ಎಂದು ಪರಿವಾರದ ಕೋಶಾಧ್ಯಕ್ಷ ಪುರುಷೋತ್ತಮ ಪಟೇಲ್ ತಿಳಿಸಿದ್ದಾರೆ.

error: Content is protected !!