ಈ ಬಾರಿ ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರ ರಚಿಸುವುದು ಖಚಿತ: ಆನಂದಪ್ಪ

ದಾವಣಗೆರೆ, ಮೇ 11- ಈ ಬಾರಿ  ಕಾಂಗ್ರೆಸ್‌ ಪಕ್ಷ  ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವುದು ಖಚಿತ ಎಂದು ಪಕ್ಷದ ಮುಖಂಡ ಎಸ್‌.ಎಲ್.ಆನಂದಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜನವಿರೋಧಿ ಆಡಳಿತದ ವಿರುದ್ಧ ಬೇಸತ್ತಿದ್ದ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದರು.

ದಾವಣಗೆರೆ ಜಿಲ್ಲೆಯ ಎಲ್ಲಾ 7 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಜಯಭೇರಿ ಬಾರಿಸಲಿದೆ ಎಂದ ಅವರು, ವಿಶೇಷವಾಗಿ ದಾವಣಗೆರೆ ಜಿಲ್ಲೆಯಲ್ಲಿ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜನ್‌ ಅವರ ಕೈ ಬಲಪಡಿಸಲು ಹಿಂದುಳಿದ ವರ್ಗ, ದಲಿತರು, ತಳ ಸಮುದಾಯದವರು ಒಂದಾಗಿದ್ದಾರೆ ಎಂದು ಹೇಳಿದರು.

 ಪಕ್ಷದ ಮುಖಂಡರಾದ ಜೆ.ಎನ್.ನಿಂಗಪ್ಪ, ಅಡಾಣಿ ಸಿದ್ದಪ್ಪ, ಕಾಳಾಚಾರಿ, ಹೆಚ್.ವೈ.ಶಶಿಧರ್, ಕರೂರು ಗಣೇಶಪ್ಪ, ರಾಮಚಂದ್ರಪ್ಪ ಅಕ್ಕಿ, ಸುರೇಶ್‌ ಎಂ.ಕೊಗುಂಡೆ, ಜಾಕಿರ್ ಸಾಬ್ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!