ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಗರಾಜ್ ಲೋಕಿಕೆರೆ ಉಮೇದುವಾರಿಕೆ

ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಗರಾಜ್ ಲೋಕಿಕೆರೆ ಉಮೇದುವಾರಿಕೆ - Janathavaniದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಗರಾಜ್ ಲೋಕಿಕೆರೆ ಅವರು ಇಂದು ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುವರು.

ಬೆಳಗ್ಗೆ 10.30ಕ್ಕೆ ನಿಟ್ಟುವಳ್ಳಿಯಲ್ಲಿನ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವರು. ನಂತರ ಅಲ್ಲಿಂದ ಮೆರವಣಿಗೆ ಪ್ರಾರಂಭಿಸಲಿದ್ದು, ಹೆಚ್.ಕೆ.ಆರ್ ವೃತ್ತ ಮಾರ್ಗವಾಗಿ ಕೆಟಿಜೆ ನಗರ ಪೊಲೀಸ್ ಠಾಣೆ ವೃತ್ತ, ಕೆಟಿಜೆ ನಗರ 2ನೇ ಅಡ್ಡ ರಸ್ತೆ, ಶಿವಪ್ಪಯ್ಯ ವೃತ್ತದ ಮುಖೇನ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪಿ.ಬಿ. ರಸ್ತೆ,  ಬಿಎಸ್ ಎನ್ ಎಲ್ ಕಚೇರಿ ಮುಖಾಂತರ ಮಹಾನಗರ ಪಾಲಿಕೆವರೆಗೆ ಸಹಸ್ರಾರು ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮೆರವಣಿಗೆ ಮೂಲಕ ತೆರಳಿ ಉಮೇದುವಾರಿಕೆ ಅರ್ಜಿ ಸಲ್ಲಿಸುವರು.

error: Content is protected !!