ರಾಣೇಬೆನ್ನೂರು, ಏ.9- ಇಲ್ಲಿನ ಅಶೋಕ ನಗರದಲ್ಲಿರುವ ನಾಗಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ದಾವಣಗೆರೆ ಡಿ.ಬಿ.ಎಸ್ ಅಕಾಡೆಮಿ ವತಿಯಿಂದ ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಪಿಯು ವಿದ್ಯಾರ್ಥಿಗಳಿಗಾಗಿ ಕೆಸಿಇಟಿ, ಸಿಎನ್ಇಇಟಿ ಕೋರ್ಸ್ ತರಬೇತಿ ನೀಡಲಾಯಿತು.
ನಾಗಶಾಂತಿ ಕಾಲೇಜಿನ ಚೇರ್ಮನ್ ಶ್ರೀಮತಿ ರಾಜೇಶ್ವರಿ ಬಿ. ಪಾಟೀಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ಸುನೀತಾ ಡಿ. ಎಮ್. ಆಗಮಿಸಿ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಪ್ರಾಯೋಗಿಕ ವಾಗಿ ಉತ್ತಮ ಶಿಕ್ಷಣ ಕೊಟ್ಟು, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವಂತೆ ಕರೆಕೊಟ್ಟರು. ಸಂಸ್ಥೆಯ ಮುಖ್ಯಸ್ಥರಾದ ಶಕುಂತಲಾ ಪಾಟೀಲ, ಕರಿಬಸಯ್ಯನವರ, ಪರಮೇಶಪ್ಪ ಅರಳಿಕಟ್ಟಿ, ಪ್ರಕಾಶ ಪಾಟೀಲ, ವೈದ್ಯರಾದ ಬಿ. ಎಸ್. ರಟ್ಟಿಹಳ್ಳಿ, ಎಸ್. ಚನ್ನಬಸಪ್ಪ ಇದ್ದರು.