ಹರಿಹರ: ರೆಡ್ಡಿ ಸಂಘದಿಂದ ಶಿಕ್ಷಕಿ ವೀಣಾಗೆ ಸನ್ಮಾನ

ಹರಿಹರ: ರೆಡ್ಡಿ ಸಂಘದಿಂದ ಶಿಕ್ಷಕಿ ವೀಣಾಗೆ ಸನ್ಮಾನ

ಹರಿಹರ, ಏ.9- ರೆಡ್ಡಿ ಸಂಘದ ತಾಲ್ಲೂಕು ಘಟಕ ಹರಿಹರ ವತಿಯಿಂದ ಸೇವೆಯಿಂದ ನಿವೃತ್ತರಾದ ಸಮಾಜದ ರಾಜನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಶ್ರೀಮತಿ ಜಿ.ಟಿ. ವೀಣಾ ಅವರನ್ನು ವಿದ್ಯಾನಗರದ ಸಂಘದ ಕಚೇರಿಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ರೆಡ್ಡಿ ಸಂಘದ ಅಧ್ಯಕ್ಷ ಮಂಜುನಾಥ ರೆಡ್ಡಿ ಕಾರ್ಯದರ್ಶಿ ಕೊಟ್ರೇಶ್ ರೆಡ್ಡಿ, ಹನುಮರೆಡ್ಡಿ ಟಿ.ಎಚ್, ಪಿ ಜಿ ಗಿರಿ ಗೌಡ್ರು ಸುರೇಶ್‌ಬಾಬು, ಹನುಮರೆಡ್ಡಿ, ಬಿ.ಹೆಚ್. ಮಂಜಪ್ಪ ಬಿದರಿ, ಬಸಪ್ಪರೆಡ್ಡಿ ವಡೇರಹಳ್ಳಿ, ಶಶಿರೆಡ್ಡಿ ಭಾನುವಳ್ಳಿ, ರಾಜಪ್ಪ ಎಂ.ಜೆ, ಆನಂದ ಭೂತರೆಡ್ಡಿ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!