ಮಲೇಬೆನ್ನೂರು, ಮಾ. 23 – ಕೊಮಾರನಹಳ್ಳಿ ಸಮೀಪ ಕಣಿವೆ ಪ್ರದೇಶದಲ್ಲಿ ರಾಜ್ಯ ಹೆದ್ದಾರಿಯ ತಿರುವುಗಳಲ್ಲಿ (ಎಸ್.ಹೆಚ್ ರಸ್ತೆ) ಎರಡು ಕಡೆ 1 ಮೀಟರ್ ರಸ್ತೆ ಅಗಲೀಕರಣ ಮಾಡುವ ಕಾಮಗಾರಿಗೆ ಶಾಸಕ ಎಸ್. ರಾಮಪ್ಪ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು ಲೋಕೋಪಯೋಗಿ ಇಲಾಖೆಯ 4 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಗ್ರಾ. ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಮಂಜುನಾಥ್, ಮಲೇಬೆನ್ನೂರಿನ ಕೆ.ಪಿ ಗಂಗಾಧರ್, ಷಾ ಅಬ್ರಾರ್, ಕುಂಬಳೂರಿನ ಎಂ. ವಾಸುದೇವ ಮೂರ್ತಿ, ಹಾಲಿವಾಣದ ಸಂತೋಷ್, ರೈತ ಸಂಘದ ಕೋಗಳಿ ಮಂಜುನಾಥ್, ಕೊಮಾರನಹಳ್ಳಿಯ ವಕೀಲ ಮಂಜುನಾಥ್ ಕರ್ಜಗಿ, ಮಹೇಶಪ್ಪ ಸತ್ತಳ್ಳೇರ, ಮಂಜಣ್ಣ ಯತ್ನಳ್ಳಿ, ಮಂಜಣ್ಣ ಸೇರಿದಂತೆ ಇಂಜಿನಿಯರ್ ಶಿವಮೂರ್ತಿ ಹಾಗೂ ಗುತ್ತಿಗೆದಾರರು ಈ ವೇಳೆ ಹಾಜರಿದ್ದರು.