ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಯೋಗಿ ನಾರೇಯಣರು

ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಯೋಗಿ ನಾರೇಯಣರು

ಕಾಲಜ್ಞಾನಿ ಶ್ರೀ ಕೈವಾರ ತಾತಯ್ಯನವರ ಜಯಂತ್ಯೋತ್ಸವ

ದಾವಣಗೆರೆ, ಮಾ.7 –  ಶ್ರೀ ಯೋಗಿ ನಾರೇಯಣರು ಬಳೆಯ ವ್ಯಾಪಾರ ಮಾಡುತ್ತಲೇ ಕಾಲಜ್ಞಾನ ಬರೆದಂತಹ ಮಹಾತ್ಮರು. ಎಲ್ಲ ಸಮಾಜಗಳಿಗೂ ಸಲ್ಲುವಂತೆ  ಕನ್ನಡ, ತೆಲುಗು, ಭಾಷೆಗಳಲ್ಲಿ ಅದ್ವೀತಿಯವಾದ ಅಧ್ಯಾತ್ಮ ಚಿಂತನೆಯನ್ನೊಳಗೊಂಡ ಕೀರ್ತನೆಗಳು, ತತ್ವಪದಗಳು, ವೇದಾಂತ ಸಾರಾವಳಿಗಳನ್ನು ಸರಳ ಭಾಷೆಯಲ್ಲಿ ರಚಿಸಿದವರು ತಾತಯ್ಯನವರು. 

ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಶ್ರೀ ಯೋಗಿ ನಾರೇಯಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ಶ್ರೀ ಯೋಗಿ ನಾರೇಯಣ ಬಲಿಜ ಸಂಘ ಇವರ ಸಹಯೋಗ ದೊಂದಿಗೆ ಬಲಿಜ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಜರುಗಿದ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. 

ಶ್ರೀ ಯೋಗಿ ನಾರೇಯಣರು ಸಮಾಜ ಸುಧಾರಕರಾಗಿದ್ದು, ಅವರು ರಚಿಸಿದ ಕಾಲಜ್ಞಾನದಲ್ಲಿ ಜಗತ್ತು ಅರಿಯಬೇಕಾದ ಅನೇಕ ಅಂಶಗಳಿವೆ, ಅವರ ತತ್ವ, ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ ಎಂದರು.

17 ನೇ ಶತಮಾನವು ಅನೇಕ ಅವಧೂತರನ್ನು ಕಂಡ ಕಾಲಘಟ್ಟದಲ್ಲಿ ಯೋಗಿ ನಾರೇಯಣರು ಒಬ್ಬರು. ಜೀವನ ಜಂಜಾಟದಿಂದ ಲೌಕಿಕತೆಯಿಂದ ಅಲೌಕಿಕತೆಯ ಕಡೆಗೆ ವಾಲಿದ ಮಹಾ ಪವಾಡ ಪುರುಷ, ಸಾಮಾನ್ಯ ಜನರ ಒಳಿತಿಗಾಗಿ ಯಾವುದೇ ಜಾತಿ, ಜನಾಂಗ ಹಾಗೂ ಭೇದ ಭಾವವಿಲ್ಲದೆ ಕೀರ್ತನೆಗಳನ್ನು ಹಾಡುವ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಿದವರು. ಮುಂದಿನ ಪೀಳಿಗೆಗೆ ಅವರ ತತ್ವಗಳು ದಾರಿದೀಪವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಬಲಿಜ ಸಮಾಜದ ಜಿಲ್ಲಾ ಅಧ್ಯಕ್ಷ ನರಸಿಂಹ ಮೂರ್ತಿ, ಸಮಾಜದ ಜಿಲ್ಲಾ ಮಹಿಳಾ ಅಧ್ಯಕ್ಷೆ ಜಯದೇವಮ್ಮ, ಉಪಾಧ್ಯಕ್ಷ ಗದ್ದಿಗೇಶ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

error: Content is protected !!