ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ದಾವಣಗೆರೆ, ಫೆ. 22 – ನಗರದ ಪಿಜೆ ಬಡಾವಣೆಯಲ್ಲಿರುವ ಪಿಸಾಳೆ ಕಾಂಪೌಂಡ್ ನಲ್ಲಿ ಗುಳ್ಳಮ್ಮನ ದೇವಸ್ಥಾನದ ಹತ್ತಿರ ಶುಭಲಕ್ಷ್ಮಿ ಮಹಿಳಾ ಮಂಡಳಿ ವತಿಯಿಂದ ಶ್ರೀ  ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದಿನೇಶ್ ಕೆ. ಶೆಟ್ಟಿ ಅವರು ಛತ್ರಪತಿ ಶಿವಾಜಿ ಮಹಾ ರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸ್ವರಾಜ್ಯದ ರಕ್ಷಣೆಗಾಗಿ ಹೋರಾಡಿದ ವೀರ ಹಾಗೂ ಹಿಂದೂ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರು ಹಿಂದುವಿನ ಉಳಿವಿಗಾಗಿ ಹೋರಾಡಿದ ಮಹಾನ್ ದಾರ್ಶನಿಕ ವ್ಯಕ್ತಿಗಳಾಗಿದ್ದರು. ಅವರ ಜಯಂತ್ಯೋತ್ಸವವನ್ನು ಇನ್ನು ವಿಜೃಂಭಣೆಯಿಂದ ನಾಡಿನಾದ್ಯಂತ ಆಚರಿಸಬೇಕು. ಅವರ ಕಾಯಕಲ್ಪಗಳನ್ನು ಎಲ್ಲಾ ಹಿಂದೂಗಳಿಗೂ ಸಾರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ನಾಗರಾಜ್ ಪಿಸಾಳೆ, ವಸಂತ ಬಾಯಿ, ಪದ್ಮರಾವ್, ಸರಳ ಜಾಧವ್, ಅಂಬಿಕ, ದೀಪ, ಛಾಯಾ ವೆಂಕಟೇಶ್, ಸತೀಶ್ ಜಾಧವ್, ಮಧು ಪವಾರ್ ಉಪಸ್ಥಿತರಿದ್ದರು.

error: Content is protected !!