ಮಾರ್ಕಂಡೇಶ್ವರ ದೇಗುಲದಲ್ಲಿ ಪಾಲಕಿ ಉತ್ಸವ

ಮಾರ್ಕಂಡೇಶ್ವರ ದೇಗುಲದಲ್ಲಿ ಪಾಲಕಿ ಉತ್ಸವ

ರಾಣೇಬೆನ್ನೂರು, ಫೆ.21- ನಗರದ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾಗರಣೆಯನ್ನು  ಭಕ್ತಿಪೂರ್ವಕವಾಗಿ ಆಚರಿಸಲಾ ಯಿತು.  ಶ್ರೀ ಗುರು ಮಾರ್ಕಂಡೇಶ್ವರ ಯುವಕ ಸಂಘ ಹಾಗೂ ಭಕ್ತ ಮಂಡಳಿಯವರು  ಸ್ವಾಮಿಗೆ ಮಹಾ ರುದ್ರಾಭಿಷೇಕವನ್ನು ನೆರವೇರಿಸಿ ವಿಶೇಷವಾದ ಹೂವಿನ ಅಲಂಕಾರವನ್ನು ಮಾಡಿಸಿದ್ದರು.  ಭಕ್ತಾದಿಗಳಿಗೆ  ಪ್ರಸಾದ ಮತ್ತು ಫಲಹಾರವನ್ನು ವಿತರಿಸಿ ಮಹಾಶಿವರಾತ್ರಿಯ ಜಾಗರಣೆಗೆ ಚಾಲನೆ ನೀಡಲಾಯಿತು.   

ಇದೇ ಸಂದರ್ಭದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಬಸವರಾಜ ಕೇಲಗಾರ ಅವರನ್ನು  ಸನ್ಮಾನಿಸಲಾಯಿತು.  ಮುಖಂಡರಾದ ಮಂಜುನಾಥ ಗೌಡ ಶಿವಣ್ಣನವರನ್ನು  ಸತ್ಕರಿಸಲಾಯಿತು 

ಹಿರಿಯರಾದ ನಾಗರಾಜ ಅಗಡಿ, ಹನುಮಂತಪ್ಪ ಮುಕ್ತೇನಹಳ್ಳಿ, ಕೆ.ಕೆ. ಹಳ್ಳಳ್ಳಿ,  ಲಕ್ಷ್ಮಣ ಕಡ್ಲಿಬಾಳ,  ಬಸವರಾಜ ಐರಣಿ, ಮಾರುತಿ ಗರಡಿಮನಿ, ನಾಗರಾಜ  ಇನ್ನು ಮುಂತಾದವರು ಭಾಗವಹಿಸಿದ್ದರು.

error: Content is protected !!