ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಯುಗಧರ್ಮದ ರಾಮಣ್ಣಗೆ ಅಧಿಕೃತ ಆಹ್ವಾನ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಯುಗಧರ್ಮದ ರಾಮಣ್ಣಗೆ ಅಧಿಕೃತ ಆಹ್ವಾನ

ಊರೂರು ತಿರುಗಿ ಲಾವಣಿ, ತತ್ವಪದ , ಜಾನಪದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವ ನನಗೆ,  ದಾವಣಗೆರೆ ಜಿಲ್ಲಾ ಕಸಾಪ ಘಟಕವು 12 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಥ್ಯಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅತೀವ ಸಂತಸ ತಂದಿದೆ ಎಂದು ಯುಗಧರ್ಮ ರಾಮಣ್ಣ ತಿಳಿಸಿದರು.

ಚನ್ನಗಿರಿ, ಫೆ. 9 – ಬಸವಾಪಟ್ಟಣ ಹೋ ಬಳಿಯ ಕೆಂಗಾಪುರ ಗ್ರಾಮದ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ಬರುವ ಮಾರ್ಚ್ 4 ಮತ್ತು 5 ರಂದು ಜರುಗಲಿರುವ ದಾವಣಗೆರೆ ಜಿಲ್ಲಾ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಾನಪದ ಕಲಾವಿದ ಯುಗಧರ್ಮ ರಾಮಣ್ಣನವರಿಗೆ ಅವರ ಹುಟ್ಟೂರಾದ ಸಿದ್ದನಮಠದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ವಾಮದೇವಪ್ಪ, ಜಿಲ್ಲಾ ಕಾರ್ಯದರ್ಶಿ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಕಸಾಪ ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್, ಕಸಾಪ ಪದಾಧಿಕಾರಿಗಳಾದ ಕೆ.ಎಸ್.ವೀರೇಶ್ ಪ್ರಸಾದ್, ಜಿ.ಎಸ್.ಶಿವರಾಜ್, ಎಸ್.ಜೆ.ಕಿರಣ್, ಕೆ.ಸಿರಾಜ್ ಅಹಮದ್, ಸಾಹಿತಿ ಫೈಜ್ನಟ್ರಾಜ್, ಕವಿ ಪ್ರಭು ಗೊಲ್ಲರಹಳ್ಳಿ, ಹನುಮಂತರಾಯಪ್ಪ, ಸಿದ್ದನಮಠದ ಹಾಲೇಶ್, ಮಕ್ಕಳ ಸಾಹಿತ್ಯ ಪರಿಷತ್‌ನ ಅಬ್ದುಲ್ ವಾಹೀದ್, ಉಜ್ಜನಪ್ಪ ಇದ್ದರು.

error: Content is protected !!