ಜಗಳೂರು : ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾಗಿ ಧನಂಜಯ ರೆಡ್ಡಿ ಆಯ್ಕೆ

ಜಗಳೂರು : ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾಗಿ ಧನಂಜಯ ರೆಡ್ಡಿ ಆಯ್ಕೆ

ಜಗಳೂರು, ಫೆ.3- ಪಿಕಾರ್ಡ್‌ ಬ್ಯಾಂಕ್‌ನ ಅಧ್ಯಕ್ಷ ರಾಗಿ ಸಿದ್ದಿಹಳ್ಳಿ ಎಂ.ಟಿ. ಧನಂ ಜಯ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಒಡಂಬಡಿಕೆಯ ಪ್ರಕಾರ ಹಿಂದಿನ ಅಧ್ಯಕ್ಷ ರಾಜೀನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು ಹದಿಮೂರು ನಿರ್ದೇಶಕರಿದ್ದು, ಇವರಲ್ಲಿ  ಎಂ.ಟಿ.ಧನಂಜಯ ರೆಡ್ಡಿ  ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್, ಧನಂಜಯ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ವ್ಯವಸ್ಥಾಪಕ ಟಿ.ಎನ್.ಭೂಷಣ್, ಉಪಾಧ್ಯಕ್ಷೆ ಲೋಲಾಕ್ಷಿ, ನಿರ್ದೇಶಕರುಗಳಾದ ಕೆ.ಬಿ.ಸಿದ್ದೇಶ್, ಎಂ.ಎಂ.ಚನ್ನಬಸಪ್ಪ, ಚೌಡಮ್ಮ, ರಾಜು, ಮಲ್ಲಿಕಾರ್ಜುನ್‌, ಶ್ರೀನಿವಾಸ್, ಸೈಯದ್, ಮಂಜುನಾಥ್‌, ಪ.ಪಂ ಸದಸ್ಯ ರಮೇಶ್ ರೆಡ್ಡಿ, ಮುಖಂಡರುಗಳಾದ  ಶ್ರೀಧರ್, ಮಂಜುನಾಥ್ ರೆಡ್ಡಿ, ಹಜರತ್ ಆಲಿ, ನರೇಂದ್ರ ಬಾಬು, ಅಜ್ಜಪ್ಪ ಮುಂತಾದವರು ಹಾಜರಿದ್ದರು.

error: Content is protected !!