ವಿದ್ಯಾಭ್ಯಾಸಕ್ಕೆ ಶ್ರೀನಿವಾಸ್ ನೆರವು

ವಿದ್ಯಾಭ್ಯಾಸಕ್ಕೆ ಶ್ರೀನಿವಾಸ್ ನೆರವು

ಹರಿಹರ, ಜ. 29 – ತಾಲ್ಲೂ ಕಿನ ದೇವರಬೆಳಕೆರೆ ಗ್ರಾಮದ ಪರಿಶಿಷ್ಟ ಜಾತಿಯ ಮಂಜಪ್ಪ, ನಾಗಮ್ಮ ದಂಪತಿ ಪುತ್ರಿ ಎಂ. ಕಾವ್ಯ ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿ ನಲ್ಲಿ 3 ನೇ ವರ್ಷದ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿದ್ದಾರೆ. 3 ವರ್ಷವೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣತೆ ಹೊಂದಿದ ಈ ವಿದ್ಯಾರ್ಥಿಯ 4 ನೆ ವರ್ಷದ ವಿದ್ಯಾಭ್ಯಾಸಕ್ಕೆ ಅನಾನುಕೂಲವಾಗಿತ್ತು. ಈ ಸಮಸ್ಯೆಯನ್ನು ಅರಿತು ಹರಿಹರದ ಯುವ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಾರೆ.

error: Content is protected !!