ದಾವಣಗೆರೆ, ಜ.23- ಶತಾಯುಷಿ, ತ್ರಿವಿಧ ದಾಸೋಹಿ, ಮಹಾ ತಪಸ್ವಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯಸ್ಮರಣೆ ಮತ್ತು ಪುಷ್ಪ ನಮನವನ್ನು ಈಶ್ವರ್ ಕಾಂಪ್ಲೆಕ್ಸ್ , ನಿರಂಜನ್ ಪ್ರಿಂಟಿಂಗ್ ಪ್ರೆಸ್ ಆವರಣದಲ್ಲಿ ವ್ಯಾಪಾರಸ್ಥರು, ಕಾಲೇಜು ವಿದ್ಯಾರ್ಥಿಗಳು, ಭಕ್ತ ಮಹಾಶಯರು ಪಾಲ್ಗೊಂಡು, ಇಂದೂಧರ್ ನಿಶಾನಿಮಠ್ ಅವರ ಅದ್ಯಕ್ಷತೆಯಲ್ಲಿ 4 ನೇ ಪುಣ್ಯ ಸ್ಮರಣೆಯನ್ನು ಆಚರಿಸಿದರು. ಬಂದಂತಹ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು. ಶ್ರೀ ಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ
![17 conmplex shivakumara shree ews 24.01.2023 ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ](https://janathavani.com/wp-content/uploads/2023/01/17-conmplex-shivakumara-shree-ews-24.01.2023-860x483.jpg)