ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ರಯತ್ನ

ಜಗಳೂರು ಶಾಸಕ ಎಸ್‌. ವಿ.ರಾಮಚಂದ್ರ ಭರವಸೆ

ಜಗಳೂರು, ಆ.18-  ಸಹಕಾರ ಬ್ಯಾಂಕ್‌ಗಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಪ್ರಯತ್ನಿಸುತ್ತೇನೆ ಎಂದು ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಎಸ್.ವಿ.  ರಾಮಚಂದ್ರ ಭರವಸೆ ನೀಡಿದರು.

ಪಟ್ಟಣದ ಪಿಎಲ್ ಡಿ ಬ್ಯಾಂಕ್‌ನಲ್ಲಿ ನಿರ್ದೇಶಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೊರೊನ ಸಂಕಷ್ಟಕ್ಕೆ ಸಿಲುಕಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ತಾವು ಬೇಡಿಕೆ ಇಟ್ಟಿ ರುವ 40 ಲಕ್ಷ  ರೂಪಾಯಿ ಸಾಲ ಮನ್ನಾ ಅಸಾಧ್ಯವಾ ಗಿದ್ದು, ಅಲ್ಪ ಮಟ್ಟಿಗೆ ಮನ್ನಾ ಮಾಡಲು ಚರ್ಚಿಸುತ್ತೇನೆ ಎಂದ ಅವರು, ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡಿಕೊಂಡು ಲಾಭ ಗಳಿಸಿ ಸ್ವತಃ ಅಭಿವೃದ್ಧಿ  ಹೊಂದಬೇಕು. ರೈತರಿಗೂ ನೆರವಾಗಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಸನ್ಮಾನ ಸ್ವೀಕರಿಸಿದ ಜಾನಪದ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ  ಬಿಳಿಚೋಡು ಪರಮೇಶ್ವರಪ್ಪ ಮಾತನಾಡಿ, ವಾಲ್ಮೀಕಿ ಜೀವನ ಚರಿತ್ರೆ ಸೇರಿದಂತೆ ಮೂರರಿಂದ ನಾಲ್ಕು ಸ್ವರಚಿತ ಪದ್ಯಗಳನ್ನು ಹಾಡಿದ್ದೇನೆ ಎಂದು ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷೆ ಚೌಡಮ್ಮ , ಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಸೂರಡ್ಡಿಹಳ್ಳಿ ಶರಣಪ್ಪ, ವಿಎಸ್ ಎಸ್‌ಎನ್  ಅಧ್ಯಕ್ಷ ಬಿಸ್ತುವಳ್ಳಿ ಬಾಬು,  ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಎಂ.ವಿ. ರಾಜು, ಸಿದ್ದೇಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ
ಪಿ.ಎಸ್. ಅರವಿಂದನ್ ಇನ್ನಿತರರು ಇದ್ದರು.

error: Content is protected !!