ಜಿಲ್ಲೆಯಲ್ಲಿ ಮೊದಲ ಹಂತದ ಲಸಿಕೆಗೆ ಸಿದ್ದತೆ

ದಾವಣಗೆರೆ ಡಿ.18 – ಕೋವಿಡ್ 19 ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ (ಜಿಲ್ಲಾ ಟಾಸ್ಕ್‍ಫೋರ್ಸ್) ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆಯಿತು.

ಸಭೆಯಲ್ಲಿ ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಮೂರು ಹಂತಗಳಲ್ಲಿ ಕೋವಿಡ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಮೊದಲನೇ ಹಂತದಲ್ಲಿ ಹೆಲ್ತ್‍ಕೇರ್ ವರ್ಕರ್ ಲಸಿಕೆ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ತಯಾರಿಸಿ ಟೆಂಪ್ಲೇಟ್‍ನಲ್ಲಿ ಪೋರ್ಟಲ್‍ಗೆ ಅಪ್‍ಲೋಡ್ ಮಾಡಲಾಗಿದೆ. 5771 ಸರ್ಕಾರಿ ಮತ್ತು 4921 ಖಾಸಗಿ ಸೇರಿದಂತೆ ಒಟ್ಟು 10692 ಹೆಲ್ತ್‍ಕೇರ್ ವರ್ಕರ್ ಮಾಹಿತಿಯನ್ನು ಅಪ್‍ಲೋಡ್ ಮಾಡಲಾಗಿದ್ದು ಮೊದಲನೇ ಹಂತಕ್ಕೆ ಲಸಿಕೆ ನೀಡಲು ಅಗತ್ಯವಾದ ಎಲ್ಲ ಸಿದ್ದತೆಗಳು ಆಗಿವೆ ಎಂದರು.

2ನೇ ಹಂತದಲ್ಲಿ ಫ್ರಂಟ್‍ಲೈನ್ ವರ್ಕರ್‍ಗಳಾದ ನಗರ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಹೋಂ ಗಾರ್ಡ್ಸ್‍ ಎನ್‍ಸಿಸಿ, ಎನ್‍ಎಸ್‍ಎಸ್, ವಿಪತ್ತು ನಿರ್ವಹಣೆ ಸ್ವಯಂ ಸೇವಕರುಗಳ ಪಟ್ಟಿ ತಯಾರಿಸಲಾಗುತ್ತಿದೆ. 3ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ದುರ್ಬಲ ವರ್ಗದ ಮತ್ತು 50 ವರ್ಷದೊಳಗಿನ ಇತರೆ ಆರೋಗ್ಯ ಸಮಸ್ಯೆ ಇರುವ ಜನರನ್ನು ಗುರುತಿಸಿ ಪಟ್ಟಿ ತಯಾರಿಸಲಾಗುವುದು ಎಂದರು.

ಲಸಿಕೆ ನೀಡುವ ಬಗ್ಗೆ ಮೈಕ್ರೋ ಪ್ಲಾನ್ ಸಿದ್ದವಾಗಿದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಆಗಿದೆ. ತಾಲ್ಲೂಕು ಮಟ್ಟದಲ್ಲಿ ಒಂದು ಸುತ್ತಿನ ಟಾಸ್ಕ್‍ಫೋರ್ಸ್ ಸಭೆ ಆಗಿದೆ ಹಾಗೂ ತಾಲ್ಲೂಕು ವೈದ್ಯಾಧಿಕಾರಿ, ವೈದ್ಯಾಧಿಕಾರಿ ಮತ್ತು ಬಿಹೆಚ್‍ಇಓ ಗಳಿಗೆ ತರಬೇತಿ ಆಗಿದೆ. ಲಸಿಕಾ ಕಾರ್ಯಕ್ರಮಕ್ಕೆ ಕಾರ್ಯಕ್ರಮ ಅಧಿಕಾರಿಗಳು, ಸೆಕ್ಟರ್ ಅಧಿಕಾರಿ, ಮೇಲ್ವಿಚಾರಣೆ ಸೇರಿದಂತೆ ಇತರೆ ಅಧಿಕಾರಿಗಳ ನಿಯೋಜನೆ ಕಾರ್ಯ ಪ್ರಗತಿಯಲ್ಲಿದೆ. 

ಮೂರು ಕೊಠಡಿ ವ್ಯವಸ್ಥೆ: ಲಸಿಕಾ ಕಾರ್ಯ ಕ್ರಮದಲ್ಲಿ 3 ಕೊಠಡಿಗಳ ವ್ಯವಸ್ಥೆ ಮಾಡಬೇಕಿದೆ. ಲಸಿಕಾ ಕೊಠಡಿ, ಲಸಿಕೆ ನೀಡಿದ ನಂತರ ನಿಗಾ ವಹಿ ಸಲು ನಿಗಾವಣೆ ಕೊಠಡಿ ಮತ್ತು ಸ್ವಲ್ಪ ಕಾಲ ವಿಶ್ರಾಂ ತಿ ನೀಡಲು ನಿರೀಕ್ಷಣಾ ಕೊಠಡಿ ಒಟ್ಟು 3 ಕೊಠಡಿ ಗಳ ವ್ಯವಸ್ಥೆ ಮಾಡಬೇಕಿದೆ. ಆದ ಕಾರಣ ಶಾಲೆಗಳು ಅಥವಾ ಸಮುದಾಯ ಭವನಗಳಲ್ಲಿ ಲಸಿಕೆ ಕಾರ್ಯಕ್ರಮ ಮಾಡಲು ಯೋಜಿಸಲಾಗುತ್ತಿದೆ.

ಲಸಿಕೆಯನ್ನು 2 ಡೋಸ್‍ಗಳಲ್ಲಿ  ನೀಡಬೇಕಾ ಗಿದ್ದು ಮೊದಲ ಡೋಸ್ ಆಗಿ 3 ವಾರಗಳ ನಂತರ ಎರಡನೇ ಡೋಸ್ ನೀಡಲಾಗುವುದು. ಮೊದಲ ಹಂತ ಮತ್ತು ಎರಡನೇ ಹಂತಗಳಿಗೆ ಲಸಿಕಾಕಾರರು ಮತ್ತು ಸಿಬ್ಬಂದಿ ಕೊರತೆ ಆಗುವುದಿಲ್ಲ. ಆದರೆ ಮೂರನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಬಹುದಾಗಿದ್ದು, ಸಿಬ್ಬಂದಿಗಳ ಕೊರ ತೆಯಾಗುವುದರಿಂದ ಇತರೆ ಇಲಾಖೆಗಳ ಸಿಬ್ಬಂದಿ ಗಳಿಗೆ ತರಬೇತಿ ನೀಡಿ, ಅವರನ್ನು ನಿಗಾವಣೆ ಮತ್ತು ನಿರೀಕ್ಷಣಾ ಕೊಠಡಿಗಳಿಗೆ ನಿಯೋಜಿಸಬಹುದು. 

ಈ ಲಸಿಕಾ ಕಾರ್ಯಕ್ರಮಕ್ಕೆ ನಗರದ ಮೆಡಿಕಲ್ ಕಾಲೇಜುಗಳ ಸಹಕಾರ ಅಗತ್ಯವಿದ್ದು ಈಗಾಗಲೇ ಬಾಪೂಜಿ ಮೆಡಿಕಲ್ ಕಾಲೇಜಿನ ವೈದ್ಯರು/ಸಿಬ್ಬಂದಿಗೆ ತರಬೇತಿ ಆಗಿದ್ದು ಎಸ್‍ಎಸ್‍ಐಎಂಎಸ್ ಕಾಲೇಜಿಗೆ ಶೀಘ್ರದಲ್ಲೇ ತರಬೇತಿ ನೀಡಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಸ್ಪಿ ಹನುಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‍ಓ ಡಾ.ನಾಗರಾಜ್, ಡಾ.ಶ್ರೀಧರ್, ಡಿಎಸ್‍ಓ ಡಾ.ರಾಘವನ್, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಗಂಗಾಧರ್ ಕೆ.ಹೆಚ್. ಡಾ.ಮುರಳೀಧರ್, ಡಾ.ನಟರಾಜ್, ತಾಲ್ಲೂಕು ವೈದ್ಯಾಧಿಕಾರಿಗಳು, ಹೋಂ ಗಾರ್ಡ್ಸ್ ಕಮಾಂಡೆಂಟ್ ಅಧಿಕಾರಿ ಡಾ.ವೀರಪ್ಪ, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಎನ್‍ಸಿಸಿ,  ಎಸ್‍ಎಸ್‍ಐಎಂಎಸ್ ಕಾಲೇಜಿನ ಪ್ರಾಂಶುಪಾಲ ಪ್ರಸಾದ್, ರೋಟರಿ, ಲಯನ್ಸ್, ರೆಡ್‍ಕ್ರಾಸ್ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

error: Content is protected !!